HEALTH TIPS

ಮಕರ ಮಾಸದ ಪೂಜೆಗಾಗಿ ಇಂದು ಬಾಗಿಲು ತೆರೆಯಲಿದೆ ಶಬರಿಮಲೆ ಸನ್ನಿಧಿ: ನಾಳೆಯಿಂದ ಭಕ್ತರಿಗೆ ಪ್ರವೇಶ; ಜನವರಿ 14 ರಂದು ಮಕರ ಬೆಳಕು

                                              

                            ಪತ್ತನಂತಿಟ್ಟ: ಮಕರ ಬೆಳಕು  ಹಬ್ಬಕ್ಕೆ ಶಬರಿಮಲೆಯ ಬಾಗಿಲನ್ನು  ಇಂದು ತೆರೆಯಲಾಗುವುದು. ನಾಳೆಯಿಂದ ಕರಿಮಲದ ಮೂಲಕ ಭಕ್ತರಿಗೆ ಪ್ರವೇಶಾನುಮತಿ ನೀಡಲಾಗಿದೆ.  ಮಕರಬೆಳಕು ಜನವರಿ 14 ರಂದು ನಡೆಯಲಿದೆ. ಮಂಡಲ ಪೂಜೆಯ ಮೂರು ದಿನಗಳ ನಂತರ ಮಕರ ಮಾಸದ ಪೂಜೆಗಳಿಗಾಗಿ  ಶಬರಿಮಲೆ ಮತ್ತೆ ತೆರೆಯಲ್ಪಡುತ್ತಿದೆ. 

                  ಇಂದು ಸಂಜೆ 5 ಗಂಟೆಗೆ ತಂತ್ರಿ ಮಹೇಶ ಮೋಹನರರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಪರಮೇಶ್ವರನ್ ನಂಬೂದಿರಿ ಶ್ರೀ ಸನ್ನಿಧಿಯ ಬಾಗಿಲು ತೆರೆದು ದೀಪ ಬೆಳಗಿಸುವರು. ಇಂದು ಭಕ್ತರ  ಆಗಮನಕ್ಕೆ ಅವಕಾಶಿರುವುದಿಲ್ಲ.  ಶುಕ್ರವಾರ ಮುಂಜಾನೆ 4 ಗಂಟೆಯಿಂದ ಯಾತ್ರಾರ್ಥಿಗಳಿಗೆ ಪ್ರವೇಶ ನೀಡಲಾಗುವುದು.

                      ಕಳೆದ ಋತುವಲ್ಲಿ 41 ದಿನಗಳಲ್ಲಿ 11 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಮಕರ ಬೆಳಿಕಿನ  ಹಿನ್ನೆಲೆಯಲ್ಲಿ ಪ್ರಸಾದ ವಿತರಣಾ ಕೌಂಟರ್‍ಗಳ ಸಂಖ್ಯೆಯನ್ನು ಹೆಚ್ಚಿಸಲು ದೇವಸ್ವಂ ಮಂಡಳಿ ನಿರ್ಧರಿಸಿದೆ. ಮೇಲ್ಛಾವಣಿ ಸೇರಿದಂತೆ ಸ್ಥಳಗಳಲ್ಲಿ ಕೌಂಟರ್ ತೆರೆಯಲಾಗುವುದು. ಮಕರವಿಳಕ್ಕು ಹಿನ್ನೆಲೆಯಲ್ಲಿ ಪಂಪಾ, ನಿಲಯ್ಕಲ್, ಎರುಮೇಲಿ ಮತ್ತು ಸನ್ನಿಧಾನಂನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries