HEALTH TIPS

ಹತ್ಯೆಗೆ ಸಂತಸಪಟ್ಟ ಎಸ್.ಡಿ.ಪಿ.ಐ: ಸಿಪಿಎಂನಲ್ಲಿ ಎಸ್.ಡಿ.ಪಿ.ಐ.ಗೆ ಸ್ಥಾನವಿಲ್ಲ: ಜ.4 ರಂದು ಕೋಮು ಸಂಘರ್ಷಕ್ಕೆದುರು ರ್ಯಾಲಿ: ಕೊಡಿಯೇರಿ

                                     

                 ತಿರುವನಂತಪುರ: ಕೇರಳದಲ್ಲಿ ಗಲಭೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಆರೋಪಿಸಿದ್ದಾರೆ. ಇಲ್ಲಿ ನಡೆಯುತ್ತಿರುವುದು ಕೋಮು ಭಾವನೆ ಕೆರಳಿಸುವ ಅಪಪ್ರಚಾರ ಇದಕ್ಕೆ ಪುಷ್ಠಿ ನೀಡಿದೆ. ಇದು ಉದ್ದೇಶಪೂರ್ವಕ ದಾಳಿ ಎಂದು ಕೊಡಿಯೇರಿ ಹೇಳಿದ್ದಾರೆ.

                  ಕೊಲೆಯಾದಾಗ ಎಸ್‍ಡಿಪಿಐಗೆ ಸಂತೋಷವಾಗುತ್ತದೆ. ಸಿಪಿಎಂನಲ್ಲಿ ನುಸುಳಲು ಎಸ್‍ಡಿಪಿಐಗೆ ಸಾಧ್ಯವಾಗದು. ಎಲ್ಲಾ ಮುಸ್ಲಿಮರು ಎಸ್‍ಡಿಪಿಐ ಸದಸ್ಯರಲ್ಲ ಎಂದು ಕೊಡಿಯೇರಿ ಹೇಳಿದರು.

              ಆಲಪ್ಪುಳ ಕೊಲೆ ಪ್ರಕರಣಗಳಲ್ಲಿ ಆರೋಪಿಗಳನ್ನು ಪೋಲೀಸರು ಬಂಧಿಸಬಹುದು. ಜನವರಿ 4 ರಂದು ಸ್ಥಳೀಯ ಕೇಂದ್ರಗಳಲ್ಲಿ ಸಿಪಿಎಂ ನೇತೃತ್ವದಲ್ಲಿ ಕೋಮು ಸಂಘರ್ಷಕ್ಕೆ ಎದುರಾಗಿ ಬೃಹತ್ ರ್ಯಾಲಿಗಳನ್ನು ಆಯೋಜಿಸಲಿದೆ ಎಂದು ಕೊಡಿಯೇರಿ ಹೇಳಿದರು.

                 ಸಿಲ್ವರ್ ಲೈನ್ ಕೇರಳದ ಯೋಜನೆಯಾಗಿದೆ. ಈ ವಿಷಯದಲ್ಲಿ ತರೂರ್ ಅವರ ನಿಲುವು ಕೇರಳದ ಸಾಮಾನ್ಯ ನಿಲುವು. ಶಶಿ ತರೂರ್ ವಿರುದ್ಧದ ಟೀಕೆಗಳು ಪಕ್ಷದ ಆಂತರಿಕ ಸಮಸ್ಯೆಗಳ ಭಾಗವಾಗಿದೆ ಎಂದು ಕೊಡಿಯೇರಿ ಬಾಲಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries