ತಿರುವನಂತಪುರ: ರಾಜ್ಯದಲ್ಲಿ ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜಿಲ್ಲೆಗಳನ್ನು ಸಿ ವರ್ಗಕ್ಕೆ ಸೇರಿಸಲಾಗಿದೆ. ಕೊಲ್ಲಂ, ಪತ್ತನಂತಿಟ್ಟ, ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳನ್ನು ಹೊಸ ಸಿ ವರ್ಗಕ್ಕೆ ಸೇರಿಸಲಾಗಿದೆ. ಈ ಜಿಲ್ಲೆಗಳಲ್ಲಿ ನಿರ್ಬಂಧಗಳು ಕಠಿಣವಾಗಿರಲಿವೆ. ಜತೆಗೆ ತಿರುವನಂತಪುರ ಜಿಲ್ಲೆ ಸಿ ಕೆಟಗರಿಯಲ್ಲಿ ಮುಂದುವರಿಯಲಿದೆ.
ಸಿ ವರ್ಗದ ಜಿಲ್ಲೆಗಳಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ. ಥಿಯೇಟರ್, ಜಿಂ ಮತ್ತು ಈಜುಕೊಳಗಳು ತೆರೆದಿರುವುದಿಲ್ಲ. ಪೂಜಾ ಸ್ಥಳಗಳಲ್ಲಿ ಆನ್ಲೈನ್ನಲ್ಲಿ ಮಾತ್ರ ಪೂಜೆ ಮಾಡಬಹುದು. ವಿವಾಹ ಮತ್ತು ಮರಣೋತ್ತರ ಸಮಾರಂಭಗಳಿಗೆ ಗರಿಷ್ಠ 20 ಜನರಿಗೆ ಮಾತ್ರ ಅವಕಾಶವಿರುತ್ತದೆ. ಟ್ಯೂಷನ್ ಸೇರಿದಂತೆ ಎಲ್ಲಾ ತರಗತಿಗಳನ್ನು ಆನ್ಲೈನ್ ಮಾಡಲು ನಿರ್ಧರಿಸಲಾಗಿದೆ.