ತಿರುವನಂತಪುರ: ಕೊರೋನಾ ವೈರಸ್ನಿಂದ ಉಂಟಾಗುವ ಕಾಯಿಲೆ, ಜಗತ್ತನ್ನು ಮಾಡಿರುವ ಗೊಂದಲ,ಗಾಬರಿಗಳು ಈಗಲೂ ಮುಂದುವರಿದಿರುವುದು ಕಳವಳಕಾರಿ.ಚೀನಾದ ವುಹಾನ್ನಲ್ಲಿ ಕೊರೋನಾ ಮೊದಲ ಬಾರಿಗೆ ದೃಢಪಟ್ಟಾಗ, ಪ್ರಪಂಚದಾದ್ಯಂತದ ಜನರು ನಮ್ಮ ತಾಯ್ನಾಡಿಗೆ ಏನೂ ಬಾಧಿಸುವುದಿಲ್ಲ ಎಂದೇ ಆಶಿಸುತ್ತಿದ್ದರು. ಕೆಲವು ದಿನಗಳ ನಂತರ, ಪ್ರಪಂಚದ ಇತರೆಡೆಗಳಿಗೆ ವುಹಾನ್ ನಿಂದ ಹಬ್ಬಲ್ಪಟ್ಟು ಮೂಲೆಮೂಲೆಗಳಿಗೂ ವ್ಯಾಪಿಸಿತು. ದೇಶದಲ್ಲೇ ಮೊದಲ ಕರೋನವೈರಸ್ ಪ್ರಕರಣ ಭಾರತದ ಪುಟ್ಟ ರಾಜ್ಯ ಕೇರಳದಲ್ಲಿ ದೃಢವಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಎರಡು ವರ್ಷಗಳ ಹಿಂದೆ ಇಂದಿನ ದಿನ ಕೇರಳದಲ್ಲಿ ಮೊದಲ ವೈರಸ್ ಪ್ರಕರಣ ವರದಿಯಾಯಿತು. ವುಹಾನ್ನಿಂದ ಆಗಮಿಸಿದ ವ್ಯೆದ್ಯಕೀಯ ವಿದ್ಯಾರ್ಥಿಗಳಿಂದ ಸೋಂಕು ದೃಢಪಟ್ಟಿತು.
ನಿಪ್ಪಾ ವೈರಸ್ ನ್ನು ನಿರ್ಮೂಲನೆ ಮಾಡಿದ ಇತಿಹಾಸವನ್ನು ಹೊಂದಿರುವ ಕೇರಳವು ಸಾಂಕ್ರಾಮಿಕ ರೋಗವನ್ನು ಅತ್ಯಂತ ಜಾಗರೂಕತೆಯಿಂದ ಎದುರಿಸಲು ಪ್ರಯತ್ನಿಸಿತು, ಆದರೆ ಮೊದಲ ಅಲೆಯು ಮುಗಿಯುವ ಹೊತ್ತಿಗೆ ರಕ್ಷಣಾ ಕಾರ್ಯಗಳು ಕುಸಿಯಲು ಪ್ರಾರಂಭಿಸಿದವು. ಇಂದು, ವೈರಸ್ನ ಮೂರನೇ ತರಂಗವನ್ನು ತಡೆಗಟ್ಟುವ ಪ್ರಯತ್ನಗಳ ಹೊರತಾಗಿಯೂ, ರಾಜ್ಯದಲ್ಲಿ ಪ್ರತಿದಿನ ಅರ್ಧ ಲಕ್ಷಕ್ಕಿಂತಲೂ ಹೆಚ್ಚು ರೋಗಿಗಳು ವರದಿಯಾಗುತ್ತಿದ್ದಾರೆ. ಮೊದಲ ಅಲೆಯ ಪರಿಣಾಮಗಳು ಮುಗಿಯುವ ಮುನ್ನವೇ ಎರಡನೇ ತರಂಗ ಪ್ರವೇಶವಾಗಿತ್ತು. ಮತ್ತು ಈಗ ಅದರ ಬಳಲಿಕೆಯ ಮಧ್ಯೆ ಮೂರನೇ ತರಂಗ ಅಪ್ಪಳಿಸಿದ್ದು ಹೌದು.
ಈ ಮಧ್ಯೆ, ರಾಜ್ಯದಲ್ಲಿ ಕೊರೊನಾ ಸಾವುಗಳನ್ನು ಮರೆಮಾಚುವ ವಿವಾದ ಪ್ರಬಲವಾಗಿದೆ. ರಾಜ್ಯದಲ್ಲಿ ಹಿಂದಿನ ಅಲೆಗಳಲ್ಲಿ ವೈರಸ್ನಿಂದ ಸಾವನ್ನಪ್ಪಿದವರಲ್ಲಿ ಅನೇಕರು ಈಗ ಪಟ್ಟಿಯಲ್ಲಿದ್ದಾರೆ. ನೂರಾರು ಕುಟುಂಬ ಸದಸ್ಯರು ಇನ್ನೂ ಧನಸಹಾಯಕ್ಕಾಗಿ ಅರ್ಜಿಗಳೊಂದಿಗೆ ಕಾಯುತ್ತಿದ್ದಾರೆ.
ಎರಡನೇ ತರಂಗವು ಅತಿ ಹೆಚ್ಚು ಸಾವುಗಳನ್ನು ದಾಖಲಿಸಿತ್ತು. ಸಾವಿನ ಪಟ್ಟಿಗೆ ಸೇರದೆ ಕೇರಳ ಬಚ್ಚಿಟ್ಟಿದ್ದ ಸಾವುಗಳು ಅಂದಿನಿಂದ ವಿವಾದಕ್ಕೀಡಾಗಿವೆ. ಸಾವಿನ ಲೆಕ್ಕಾಚಾರದ ವಿಧಾನವನ್ನು ನಂತರ ಬದಲಾಯಿಸಬೇಕಾಯಿತು. 7,000 ಸಾವುಗಳನ್ನು ನಂತರ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಒಪ್ಪಿಕೊಂಡಿತು. ಹಳೆಯ ಸಾವುಗಳು ಸಾಮೂಹಿಕವಾಗಿ ಹೊರಬಂದಾಗ, ಇಂದು ಸಾವಿನ ಸಂಖ್ಯೆ 53,000 ದಾಟಿದೆ. ಇದರೊಂದಿಗೆ ಕೇರಳವು ದೇಶದಲ್ಲೇ ಅತಿ ಹೆಚ್ಚು ಕೊರೋನಾ ಸಾವಿನಲ್ಲಿ ಎರಡನೇ ಸ್ಥಾನದಲ್ಲಿದೆ. ಮೂರನೇ ಮತ್ತು ಮೊದಲ ಅಲೆಯಲ್ಲಿ ಸಾವಿನ ಸಂಖ್ಯೆ ಸರ್ಕಾರಕ್ಕೆ ಗಂಭೀರ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ.