HEALTH TIPS

ಸೆಕ್ರೆಟರಿಯೇಟ್ ನ ದರ್ಬಾರ್ ಹಾಲ್ ನಲ್ಲಿ ರಾಷ್ಟ್ರಪತಿಗಳ ಭಾವಚಿತ್ರ ಮರುಸ್ಥಾಪಿಸಬೇಕು: ಪರಿಶಿಷ್ಟ ಜಾತಿ ಮೋರ್ಚಾದಿಂದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಕೆ

                 ತಿರುವನಂತಪುರ: ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳು ನಡೆಯುವ ಸೆಕ್ರೆಟರಿಯೇಟ್‍ನ ದರ್ಬಾರ್ ಹಾಲ್‍ನಲ್ಲಿ ರಾಷ್ಟ್ರಪತಿಗಳ ಭಾವಚಿತ್ರವನ್ನು ಮರುಸ್ಥಾಪಿಸಬೇಕು ಎಂದು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪರಿಶಿಷ್ಟ ಜಾತಿ ಮೋರ್ಚಾ ಒತ್ತಾಯಿಸಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಚಿತ್ರವು ಅವರು ರಾಜೀನಾಮೆ ನೀಡುವವರೆಗೂ ಇತ್ತು. ಹಾಗಾಗಿ ಪ್ರಸ್ತುತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾವಚಿತ್ರವನ್ನು ದರ್ಬಾರ್ ಹಾಲ್ ನ ನಿಗದಿತ ಸ್ಥಳದಲ್ಲಿ ಇಡಬೇಕು ಎಂದು ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ ಶಾಜುಮೋನ್ ವಟ್ಟೆಕಾಡ್ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.

                     ಮಹಾತ್ಮ ಗಾಂಧಿ ಸೇರಿದಂತೆ ಹಲವು ರಾಷ್ಟ್ರ ನಾಯಕರ ಭಾವಚಿತ್ರಗಳಿವೆ. ಆದರೆ 2017ರ ಜುಲೈ 25ರಿಂದ ಪ್ರಥಮ ಪ್ರಜೆಯ ಚಿತ್ರ ಹಾಕಬೇಕಾದ ಸ್ಥಳ ಖಾಲಿಯಾಗಿದೆ. ಹಲವು ವರ್ಷಗಳಿಂದ ಡಯಾಸ್‍ನ ಮೇಲಿರುವ ದರ್ಬಾರ್ ಹಾಲ್‍ನಲ್ಲಿ ರಾಷ್ಟ್ರಪತಿಗಳ ಭಾವಚಿತ್ರವನ್ನು ಸ್ಥಾಪಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ದರ್ಬಾರ್ ಹಾಲ್‍ನಲ್ಲಿ ಭಾರತದ ಪ್ರಥಮ ಪ್ರಜೆಯ ಭಾವಚಿತ್ರವನ್ನು ಹಾಕದೇ ರಾಜ್ಯ ಸರ್ಕಾರ ನಿರ್ಲಕ್ಷ್ಯ ಕ್ರಮ ಕೈಗೊಂಡಿರುವುದು ಖಂಡನೀಯ ಎಂದು ಪರಿಶಿಷ್ಟ ಜಾತಿ ಮೋರ್ಚಾ ಗಮನ ಸೆಳೆದಿದೆ.

                  ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವೂ ಹೌದು. ಸಿಪಿಎಂ ಮತ್ತು ಪಿಣರಾಯಿ ಸರ್ಕಾರದ ದಲಿತ ಪ್ರೇಮ ಬೂಟಾಟಿಕೆಗೆ ಸಾಕ್ಷಿಯಾಗಿದೆ ಎಂದು ಪರಿಶಿಷ್ಟ ಜಾತಿ ಮೋರ್ಚಾ ಬೆಟ್ಟು ಮಾಡಿದೆ. ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್ ಕೂಡ ನಿರ್ದೇಶನ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

                   ಇಷ್ಟು ದಿನ ಭಾರತದ ರಾಷ್ಟ್ರಪತಿಯವರ ಚಿತ್ರವನ್ನು ಏಕೆ ಹಾಕಿಲ್ಲ ಎಂಬುದನ್ನು ರಾಜ್ಯ ಸರ್ಕಾರ ವಿವರಿಸಬೇಕು ಎಂದು ಶಾಜುಮೋನ್ ವಟ್ಟೆಕಾಡ್ ಆಗ್ರಹಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries