HEALTH TIPS

ಉಕ್ರೇನ್ ನಲ್ಲಿ 2ನೇ ಭಾರತೀಯ ಪ್ರಜೆ ಸಾವು; ಆಪರೇಷನ್ ಗಂಗಾ ಕಾರ್ಯಾಚರಣೆ ತೀವ್ರ, 24 ಗಂಟೆಗಳಲ್ಲಿ 15 ವಿಶೇಷ ವಿಮಾನ

             ನವದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಭಾರತದ 2ನೇ ಪ್ರಜೆ ಸಾವನ್ನಪ್ಪಿದ ಬೆನ್ನಲ್ಲೇ ಕೇಂದ್ರ ಸರ್ಕಾರ ತನ್ನ ಆಪರೇಷನ್ ಗಂಗಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.

           ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೈಗೊಂಡ ನಿರ್ಣಯಗಳಂತೆ ಇದೀಗ ಸಂಘರ್ಷ ಪೀಡಿತ ಉಕ್ರೇನ್ ನಲ್ಲಿರುವ ಭಾರತೀಯ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಅದರಂತೆ ಮುಂದಿನ 24 ಗಂಟೆಗಳಲ್ಲಿ ಉಕ್ರೇನ್ ನಿಂದ ಭಾರತೀಯರನ್ನು ಕರೆತರಲು 15 ವಿಶೇಷ ವಿಮಾನಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ಉಕ್ರೇನ್ ನಲ್ಲಿದ್ದ ಭಾರತೀಯರ ಪೈಕಿ ಸುಮಾರು 17 ಸಾವಿರ ಪ್ರಜೆಗಳು ದೇಶಕ್ಕೆ ಸುರಕ್ಷಿತವಾಗಿ ಆಗಮಿಸಿದ್ದು, ಬಾಕಿ ಉಳಿದಿರುವ ಭಾರತೀಯರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಉಳಿದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಆಪರೇಷನ್ ಗಂಗಾ ಅಡಿಯಲ್ಲಿ ವಿಮಾನಗಳನ್ನು ಹೆಚ್ಚಿಸಲಾಗಿದೆ.

              ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಭಾರತದ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿದ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗುತ್ತಿತ್ತು. ಆದರೆ ಇದೀಗ ರಾಯಭಾರ ಕಚೇರಿಯಲ್ಲಿ ನೋಂದಾಯಿಸದ ಸಾವಿರಾರು ವಿದ್ಯಾರ್ಥಿಗಳನ್ನೂ ಕೂಡ ಸ್ಥಳಾಂತರ ಮಾಡಲಾಗುತ್ತಿದೆ. ಇದಕ್ಕಾಗಿ ಆಪರೇಷನ್ ಗಂಗಾ ಅಡಿಯಲ್ಲಿನ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ, ಆಪರೇಷನ್ ಗಂಗಾ ಅಡಿಯಲ್ಲಿ ಆರು ವಿಮಾನಗಳು ಭಾರತಕ್ಕೆ ಬಂದಿಳಿದಿದ್ದು, ಒಟ್ಟು ವಿಮಾನಗಳ ಸಂಖ್ಯೆಯನ್ನು 15 ಕ್ಕೆ ಏರಿಕೆಯಾಗಿದೆ. ಈ ಪೈಕಿ 8 ವಿಮಾನಗಳು ಬುಕಾರೆಸ್ಟ್‌ನಿಂದ, 5 ಬುಡಾಪೆಸ್ಟ್‌ನಿಂದ ಮತ್ತು 2 ರ್ಜೆಸ್ಜೋವ್‌ನಿಂದ ಭಾರತಕ್ಕೆ ಆಗಮಿಸಿವೆ. ಈ ವಿಮಾನಗಳಲ್ಲಿ ಹಿಂದಿರುಗಿದ ಒಟ್ಟು ಭಾರತೀಯರ ಸಂಖ್ಯೆ 3,352ರಷ್ಟಿದ್ದು, 1796 ಜನರನ್ನು ರೊಮೇನಿಯಾ ಮೂಲಕ, 430 ಪೋಲೆಂಡ್ ಮೂಲಕ ಮತ್ತು 1126 ಹಂಗೇರಿ ಮೂಲಕ ಸ್ಥಳಾಂತರಿಸಲಾಯಿತು ಎಂದು ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

                            ಕಾರ್ಯಾಚರಣೆಗೆ ವಾಯುಸೇನೆ ಸಾಥ್
           ಅಂತೆಯೇ ಮುಂದಿನ 24 ಗಂಟೆಗಳಲ್ಲಿ 15 ವಿಮಾನಗಳನ್ನು ನಿಗದಿಪಡಿಸಲಾಗಿದೆ, ಅವುಗಳಲ್ಲಿ ಹಲವು ಈಗಾಗಲೇ ಉಕ್ರೇನ್ ಗೆ ತೆರಳುತ್ತಿವೆ. ಭಾರತೀಯ ವಾಯುಸೇನೆ ಕೂಡ ಆಪರೇಷನ್ ಗಂಗಾಗೆ ಸಾಥ್ ನೀಡುತ್ತಿದ್ದು, ಬುಚಾರೆಸ್ಟ್‌ನಿಂದ ಮೊದಲ C-17 ವಿಮಾನವು ಬುಧವಾರ ರಾತ್ರಿಯ ನಂತರ ಬುಕಾರೆಸ್ಟ್‌ನಿಂದ ದೆಹಲಿಗೆ ಮರಳುವ ನಿರೀಕ್ಷೆಯಿದೆ. ಇಂದು ಬುಡಾಪೆಸ್ಟ್, ರ್ಜೆಸ್ಜೋವ್ ಮತ್ತು ಬುಕಾರೆಸ್ಟ್‌ನಿಂದ ಮೂರು ಐಎಎಫ್ ವಿಮಾನಗಳನ್ನು ಕೈಗೊಳ್ಳಲಾಗುವುದು. 

                            ಉಕ್ರೇನ್ ಗೆ ಮಾನವೀಯ ನೆರವು
         ಇದೇ ವಾಯುಸೇನೆ ವಿಮಾನದಲ್ಲಿ ಔಷಧಗಳು, ವೈದ್ಯಕೀಯ ಉಪಕರಣಗಳು, ಡೇರೆಗಳು, ಹೊದಿಕೆಗಳು, ಸೌರ ದೀಪಗಳು ಮತ್ತು ಇತರ ವಸ್ತುಗಳ ರೂಪದಲ್ಲಿ ಮಾನವೀಯ ನೆರವನ್ನು ಉಕ್ರೇನ್‌ ನ ಸಂಘರ್ಷ ಪೀಡಿತ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ. 2 ಟನ್ ತೂಕದ ಔಷಧಗಳನ್ನು ಒಳಗೊಂಡ ಮೊದಲ ವಿಮಾನವನ್ನು ಮಾರ್ಚ್ 1 ರಂದು ಪೋಲೆಂಡ್ ಮೂಲಕ ಕಳುಹಿಸಲಾಯಿತು ಮತ್ತು ಇನ್ನೂ 3 ಟ್ರಂಚ್‌ಗಳನ್ನು (ಡೇರೆಗಳು, ಹೊದಿಕೆಗಳು, ಮಲಗುವ ಚಾಪೆಗಳು ಇತ್ಯಾದಿ - 16 x 2 ಟನ್‌ಗಳು) ಮಾರ್ಚ್ 2 ರಂದು (1 IAF ವಿಮಾನದಿಂದ) ರೊಮೇನಿಯಾ ಮತ್ತು ಪೋಲೆಂಡ್ ಮೂಲಕ ಕಳುಹಿಸಲಾಯಿತು ಎಂದು ಹೇಳಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries