HEALTH TIPS

ತಲೆಬೈಲು ಮಠ ಶ್ರೀ ನರಸಿಂಹ ದೇವರಿಗೆ ನೂತನ ಸೋಪಾನ ಪೀಠ ಸಮರ್ಪಣೆ


             ಮುಳ್ಳೇರಿಯ: ಮವ್ವಾರು ಸಮೀಪದ ತಲೆಬೈಲು ಶ್ರೀ ಕಾಣಿಯೂರು ಶ್ರೀ ನರಸಿಂಹ ದೇವರ ಮಠದಲ್ಲಿ ಶ್ರೀ ದೇವರಿಗೆ ನೂತನ ಸೋಪಾನ ಪೀಠವನ್ನು ಸಮರ್ಪಿಸಲಾಯಿತು. ಉಡುಪಿ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರ ಅನುಗ್ರಹ ಮತ್ತು ಮಾರ್ಗದರ್ಶನದಂತೆ ಅವರ ದಿವ್ಯ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ಜರಗಿತು.
                ಶ್ರೀಮಠದ ಭಕ್ತರಾದ ಬೆಂಗಳೂರಿನ ವೇದಮೂರ್ತಿ ಗುರುರಾಜ ಆಚಾರ್ಯ ಅವರು ಸೋಪಾನ ಪೀಠವನ್ನು ಸೇವಾರೂಪವಾಗಿ ಸಮರ್ಪಿಸಿದ್ದರು. ಬೆಳಗ್ಗೆ ಗಣಪತಿ ಹೋಮ, ಶ್ರೀ ನರಸಿಂಹ ದೇವರ ಪೀಠ ಪ್ರತಿಷ್ಠೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಉಡುಪಿ ಕಾಣಿಯೂರು ಮಠ ಅಧೀನದಲ್ಲಿರುವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಮುಂದಿನ ದಿನಗಳಲ್ಲಿ ನಡೆಯಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries