HEALTH TIPS

ಸತತ ನಾಲ್ಕನೇ ದಿನವೂ ಅಪಘಾತಕ್ಕೀಡಾದ ಕೆ-ಸ್ವಿಫ್ಟ್!


          ವಯನಾಡು: ಕೆಎಸ್‌ಆರ್‌ಟಿಸಿಯ ಕೆ-ಸ್ವಿಫ್ಟ್ ಬಸ್ ಸತತ ನಾಲ್ಕನೇ ದಿನವೂ ಅಪಘಾತಕ್ಕೀಡಾಗಿದೆ.  ವಯನಾಡ್ ಪಾಸ್ ನಲ್ಲಿ ಬೆಳಗ್ಗೆ ಈ ದುರ್ಘಟನೆ ನಡೆದಿದೆ.  ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
        ತಾಮರಸ್ಸೆರಿ ಪಾಸ್‌ನ ಆರನೇ ತಿರುವಿನಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.  ಬಸ್ ತಿರುವನಂತಪುರದಿಂದ ಮಾನಂದವಾಡಿಗೆ ತೆರಳುತ್ತಿತ್ತು.  ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಮಾಡಿಕೊಡಲು ಮುಂದಾದಾಗ ಬಸ್ ಗುಡ್ಡಕ್ಕೆ ಡಿಕ್ಕಿ ಹೊಡೆದಿದೆ.  ಅಪಘಾತ  ಸಣ್ಣ ಪ್ರಮಾಣದಲ್ಲಿದ್ದ  ಕಾರಣ ಬಸ್ ಪ್ರಯಾಣ ಮುಂದುವರೆಯಿತು.
        ನಿನ್ನೆ ರಾತ್ರಿ ತಿರುವನಂತಪುರದಿಂದ ವಯನಾಡಿಗೆ ಬಸ್ ಹೊರಟಿತ್ತು.  ಬಸ್ಸಿನ ನೌಕರರು ತಿರುವನಂತಪುರಂ ಮತ್ತು ಕರುನಾಗಪಲ್ಲಿಯವರು.
         ನಿನ್ನೆ ರಾತ್ರಿ  ಮಲಪ್ಪುರಂ ಕೋಟೆಯಲ್ಲಿ ಕೂಡಾ ಅಪಘಾತ ನಡೆದಿತ್ತು.  ಅಪಘಾತದಲ್ಲಿ ವಾಹನದ ಸೈಡ್ ಮಿರರ್ ಮತ್ತು ಮುಂಭಾಗದ ಗಾಜು ಪುಡಿಪುಡಿಯಾಗಿದೆ.  ಈ ಹಿಂದೆ ತಿರುವನಂತಪುರಂನ ಕಲ್ಲಂಬಳಂ ಮತ್ತು ಮಲಪ್ಪುರಂನ ಚಂಕುವೆಟ್ಟಿಯಲ್ಲಿ ಬಸ್‌ಗಳು ಅಪಘಾತಕ್ಕೀಡಾಗಿದ್ದವು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries