HEALTH TIPS

ಕೊರೋನಾ ನಿಯಂತ್ರಣಗಳ ಸಡಿಲಿಕೆ; ವಿಷು ದಿನ ಶಬರಿಮಲೆಯಲ್ಲಿ ಭಾರೀ ನೂಕುನುಗ್ಗಲು

                    ಶಬರಿಮಲೆ: ನಿನ್ನೆ ವಿಷು ದಿನದಂದು ಸಾವಿರಾರು ಮಂದಿ ಶಬರಿಮಲೆಗೆ ಭೇಟಿ ನೀಡಿದ್ದಾರೆ. ಅಪಾರ ಭಕ್ತರ ಸಮ್ಮುಖದಲ್ಲಿ ವಿಷುಕಣಿ ದರ್ಶನ ಸೇರಿದಂತೆ ಎಲ್ಲ ವಿಧಿವಿಧಾನಗಳು ನೆರವೇರಿದವು. ಮುಂದಿನ ದಿನಗಳಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

                   ಎರಡು ವರ್ಷಗಳ ಕೊರೋನಾ ನಿರ್ಬಂಧಗಳನ್ನು ಸಡಿಲಿಸಿದ ನಂತರ ಶಬರಿಮಲೆಗೆ ಹೆಚ್ಚು ಹೆಚ್ಚು ಯಾತ್ರಾರ್ಥಿಗಳು ಬರುವ ನಿರೀಕ್ಷ್ಷೆ ಇದೀಗಲೇ ಕಂಡುಬಂದಿದೆ.  ಸನ್ನಿಧಾನದಲ್ಲಿ ಬೆಳಗ್ಗೆ 4 ಗಂಟೆಗೆ ನಡೆ ತೆರೆದು ದರ್ಶನ ಆರಂಭಿಸಿದಾಗಿನಿಂದ ರಾತ್ರಿ ಹರಿವರಾಸನಂ ಹಾಡಿ ಉತ್ಸವ ಮುಕ್ತಾಯವಾಗುವವರೆಗೂ ನೂಕುನುಗ್ಗಲು ಉಂಟಾಗಿತ್ತು. ವಿಷು ದಿನದಂದು ಬೆಳಗ್ಗೆ ಅಯ್ಯಪ್ಪನ ದರ್ಶನ ಪಡೆಯಲು ಯಾತ್ರಾರ್ಥಿಗಳು ಸನ್ನಿಧಾನದಲ್ಲಿ ದಿನಗಳ ಹಿಂದಿನಿಂದಲೇ ಸಾಲುಗಟ್ಟಿ ನಿಂತಿದ್ದರು.

               ಪೋಲೀಸ್, ದೇವಸ್ವಂ ಅಧಿಕಾರಿಗಳು ಕೂಡ ಜನಸಂದಣಿಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಭಕ್ತರ ಸಂಖ್ಯೆ ಹೆಚ್ಚಾದಂತೆ ವ್ಯಾಪಾರಸ್ಥರಿಗೂ ಸಂಕಷ್ಟ ಎದುರಾಗಿದೆ. ಮುಂದಿನ ದಿನಗಳಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries