HEALTH TIPS

ಕುತುಬ್ ಮಿನಾರ್ ನಲ್ಲಿರುವ ಗಣೇಶ ವಿಗ್ರಹ ತೆರವುಗೊಳಿಸದಂತೆ ಎಎಸ್ಐಗೆ ನ್ಯಾಯಾಲಯದ ನಿರ್ದೇಶನ

                  ನವದೆಹಲಿ: ಐತಿಹಾಸಿಕ ಕುತುಬ್ ಮಿನಾರ್ ನಲ್ಲಿರುವ ಎರಡು ಗಣೇಶ ವಿಗ್ರಹವನ್ನು ತೆರವುಗೊಳಿಸದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ದೆಹಲಿಯ ನ್ಯಾಯಾಲಯವೊಂದು ನಿರ್ದೇಶಿಸಿದೆ.

                ಮುಂದಿನ ವಿಚಾರಣೆವರೆಗೆ ಯಾಥಾಸ್ಥಿತಿ ಕಾಪಾಡುವಂತೆ  ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ನಿಖಿಲ್ ಚೋಪ್ರಾ ಏಪ್ರಿಲ್ 13 ರಂದು ಆದೇಶ ಹೊರಡಿಸಿದ್ದು, ಮುಂದಿನ ವಿಚಾರಣೆಯನ್ನು ಮೇ 17ಕ್ಕೆ ಮುಂದೂಡಿದ್ದಾರೆ.

               ಜೈನ ತೀರ್ಥಂಕರ ರಿಷಬ್ ದೇವರ ಪರವಾಗಿ ಅರ್ಜಿ ಸಲ್ಲಿಸಿದ ವಕೀಲ ಹರಿಶಂಕರ್ ಜೈನ್, ಕುತುಬ್ ಐಬಾಕ್ ನಿಂದ ಸುಮಾರು 27 ದೇವಾಲಯಗಳು ಭಾಗಶ: ಹಾನಿಗೊಳಲಾಗಿವೆ. ಕುತುಬ್ ಮಿನರ್ ಆವರಣದಲ್ಲಿ ಗಣೇಶನ ಎರಡು ವಿಗ್ರಹಗಳಿದ್ದು, ಅವುಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ತೆರವುಗೊಳಿಸಿರುವ ಸಾಧ್ಯತೆಯಿರುವುದಾಗಿ ಹೇಳಿದರು.

               ಇದು ವಿವಿಧ ವರ್ಗದ ಜನರು ಹಾಗೂ ಗಣೇಶ್ ವಿಗ್ರಹದಲ್ಲಿ ನಂಬಿಕೆ ಇಟ್ಟಿರುವವರ ಭಾವನೆಗಳಿಗೆ ಧಕ್ಕೆ ತರುವಂತಾಗಿದೆ. ಈ ಹಂತದಲ್ಲಿ ಪ್ರತಿವಾದಿಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries