HEALTH TIPS

ಯಾರೇ ಆಗಲಿ ಕೆ.ಎಸ್.ಇ.ಬಿ. ವಿದ್ಯುತ್ ಭವನ ಸುತ್ತುವರಿದರೂ ಅಧ್ಯಕ್ಷರು ಬಗ್ಗುವವರಲ್ಲ: ಕೆ.ಎಸ್.ಇ.ಬಿ. ಪ್ರತಿಭಟನೆಗೆ ತಣ್ಣೀರೆರಚಿದ ಬಿ ಅಶೋಕ್

                                          

                   ತಿರುವನಂತಪುರ: ವಿದ್ಯುತ್ ಭವನಕ್ಕೆ ಮುತ್ತಿಗೆ ಹಾಕಿ ಮುಷ್ಕರವನ್ನು ತೀವ್ರಗೊಳಿಸಲು ಕೆಎಸ್‍ಇಬಿ ಅಧಿಕಾರಿಗಳ ಸಂಘದ ಕ್ರಮವನ್ನು ತಡೆಯಲು ವಿದ್ಯುತ್ ಮಂಡಳಿ ಅಧ್ಯಕ್ಷ ಬಿ.ಅಶೋಕ್ ಮುಂದಾಗಿದ್ದಾರೆ.

                  ಅಧ್ಯಕ್ಷರು ಕೆಎಸ್‍ಇಬಿಯಲ್ಲಿ ಹೋರಾಟಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಮುಷ್ಕರದಲ್ಲಿ ಪಾಲ್ಗೊಂಡವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

                    ಮುಷ್ಕರ ನಿರತರು ಕಾರ್ಮಿಕರಲ್ಲ ಬದಲಾಗಿ ವ್ಯವಸ್ಥಾಪಕರು ಎಂದು ಅವರು ಬೊಟ್ಟುಮಾಡಿದರು. ದಿನವೊಂದಕ್ಕೆ 5ರಿಂದ 10 ಸಾವಿರ ರೂ.ವರೆಗೆ ಕೂಲಿ ನೀಡುತ್ತಿದ್ದು, ಇದು ಸರಿಯೇ ಎಂಬುದನ್ನು ಜನರೇ ನಿರ್ಧರಿಸಲಿ ಎಂದರು.

                  ಅಮಾನತುಗೊಂಡಿರುವ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದ ಅವರು, ವರ್ಗಾವಣೆಯು ಆಡಳಿತ ಮಂಡಳಿಯ ಉದ್ದೇಶಪೂರ್ವಕ ನಿರ್ಧಾರವಾಗಿದೆ. ಬೆದರಿಕೆ ಮತ್ತು ದೂಷಣೆಯಿಂದ ಏನನ್ನೂ ಬದಲಾಯಿಸಲು ಸಾಧ್ಯವಿಲ್ಲ ಎಂದರು.

         ವಿದ್ಯುತ್ ಭವನ ಸುತ್ತುವರಿದರೂ ಕೆಎಸ್‍ಇಬಿಯಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸಬೇಡಿ ಎಂದು ಅಧ್ಯಕ್ಷರು ಹೇಳಿದರು. ನೀಡಬಹುದಾದ ನ್ಯಾಯ ಸಸ್ಪೆಕ್ಷನ್ ಗೆ ಒಳಗಾದವರಿಗೆ ಈಗಾಗಲೇ ನೀಡಲಾಗಿದೆ. ಆದರೆ ಪ್ರತಿಭಟನೆ ಮುಂದುವರಿಸಲು ಎಡ ಸಂಘಟನೆಗಳು ತೀರ್ಮಾನಿಸಿವೆ.


       

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries