ಅಹಮದಾಬಾದ್: 'ಮೂರನೇ ತರಗತಿಯಿಂದಲೇ ಶಾಲೆಗಳಲ್ಲಿ ಸಂಸ್ಕೃತವನ್ನು ಪರಿಚಯಿಸಬೇಕು' ಎಂದು ಆರ್ಎಸ್ಎಸ್ ಸಂಯೋಜಿತ ಸಂಸ್ಕೃತ ಭಾರತಿಯು ಗುಜರಾತ್ ಸರ್ಕಾರವನ್ನು ಕೋರಿದೆ.
ಅಹಮದಾಬಾದ್: 'ಮೂರನೇ ತರಗತಿಯಿಂದಲೇ ಶಾಲೆಗಳಲ್ಲಿ ಸಂಸ್ಕೃತವನ್ನು ಪರಿಚಯಿಸಬೇಕು' ಎಂದು ಆರ್ಎಸ್ಎಸ್ ಸಂಯೋಜಿತ ಸಂಸ್ಕೃತ ಭಾರತಿಯು ಗುಜರಾತ್ ಸರ್ಕಾರವನ್ನು ಕೋರಿದೆ.
'ಹಾಡುಗಳು, ಶ್ಲೋಕಗಳು ಮತ್ತು ಸಣ್ಣ ಕಥೆಗಳ ರೂಪದಲ್ಲಿ ಸಂಸ್ಕೃತವನ್ನು ಪರಿಚಯಿಸಬೇಕು.
ಭಾರತೀಯ ಭಾಷಾ ವ್ಯವಸ್ಥೆಗೆ ಸಂಸ್ಕೃತವು ಕೀಲಿಕೈ ಇದ್ದಂತೆ. ನಾವು ಸಂಸ್ಕೃತವನ್ನು ಕಲಿತರೆ, ಅರ್ಥೈಸಿಕೊಂಡರೆ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯ' ಎಂದು ಪಾಲಿವಾಲ್ ಪ್ರತಿಪಾದಿಸಿದ್ದಾರೆ.
'ಹಿಮಾಚಲ ಪ್ರದೇಶವು ಮೂರನೇ ತರಗತಿಯಿಂದ ಹಾಗೂ ಛತ್ತೀಸಗಡ ಸರ್ಕಾರವು ಎರಡನೇ ತರಗತಿಯಿಂದಲೇ ಸಂಸ್ಕೃತವನ್ನು ಪರಿಚಯಿಸುತ್ತಿದೆ. ಶಾಲೆಯ ಪ್ರಾಥಮಿಕ ಹಂತದಲ್ಲೇ ಸಂಸ್ಕೃತವನ್ನು ಪರಿಚಯಿಸಿದರೆ ಅದು ಇತರ ಭಾರತೀಯ ಭಾಷೆಗಳ ಬೆಳವಣಿಗೆಗೆ ಪೂರಕವಾಗಲಿದೆ. ಸಂಸ್ಕೃತವನ್ನು ನಿರ್ಲಕ್ಷಿಸುತ್ತಿರುವುದರಿಂದ ನಾವು ನಮ್ಮ ಶಬ್ದ ಭಂಡಾರವನ್ನು ಕಳೆದುಕೊಳ್ಳುತ್ತಿದ್ದೇವೆ' ಎಂದೂ ಅವರು ಹೇಳಿದ್ದಾರೆ.