HEALTH TIPS

ಖಾದರ್ ವಿರುದ್ಧ ಮುಸ್ಲಿಂ ಲೀಗ್ ಏನೊಂದೂ ಮಾತನಾಡಬಾರದು: ಖಾದರ್ ರನ್ನು ಲೀಗ್‍ನಿಂದ ಹೊರಹಾಕಿದರೂ ಅನಾಥರಾಗುವುದಿಲ್ಲ; ಭಾರತೀಯ ಸಂಸ್ಕøತಿಯನ್ನು ಎತ್ತಿ ಹಿಡಿದ ವ್ಯಕ್ತಿ ಕೆ.ಎನ್.ಎ.ಖಾದರ್: ಎಪಿ ಅಬ್ದುಲ್ಲಕುಟ್ಟಿ

                      ಕೋಝಿಕ್ಕೋಡ್: ಕೇಸರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ  ಮುಸ್ಲಿಂ ಲೀಗ್ ನಿಂದ ಟೀಕೆ ಎದುರಿಸುತ್ತಿರುವ ಕೆಎನ್ ಎ ಖಾದರ್ ಅವರನ್ನು ಎಪಿ ಅಬ್ದುಲ್ಲಕುಟ್ಟಿ ಬೆಂಬಲಿಸಿರುವರು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ.ಅಬ್ದುಲ್ಲಕುಟ್ಟಿ ಮಾತನಾಡಿ, ಕೆ.ಎನ್.ಎ.ಖಾದರ್ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದು, ಲೀಗ್ ಖಾದರ್ ಅವರನ್ನು ಹೊರಹಾಕಿದರೂ ಅನಾಥರಾಗುವುದಿಲ್ಲ ಎಂದಿರುವರು.

                 ಖಾದರ್ ಅವರು ವೇದಗಳನ್ನು ಆಳವಾಗಿ ಅಧ್ಯಯನ ಮಾಡಿದವರು. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದವರು. ಖಾದರ್ ರಾಷ್ಟ್ರ ರಾಜಕಾರಣದಲ್ಲೂ ಪ್ರಮುಖ ವ್ಯಕ್ತಿಯಾಗಬಹುದು. ಖಾದರ್ ವಿರುದ್ಧ ಮುಸ್ಲಿಂ ಲೀಗ್ ಏನೂ ಹೇಳಬಾರದು.  ಲೀಗ್‍ನಿಂದ ಹೊರಹಾಕಿದರೂ ಖಾದರ್ ಅನಾಥರಾಗುವುದಿಲ್ಲ. ಉಗ್ರಗಾಮಿ ಗುಂಪುಗಳ ಮುಂದೆ ಮುಸ್ಲಿಂ ಲೀಗ್ ಮಂಡಿಯೂರುತ್ತಿದ್ದು, ಖಾದರ್ ವಿರುದ್ಧ ಕೆಎನ್‍ಎ ಅವರನ್ನು ಎಳೆತಮದು ಅನಗತ್ಯ ವಿವಾದ ಎಬ್ಬಿಸುತ್ತಿದೆ ಎಂದು ಅಬ್ದುಲ್ಲಕುಟ್ಟಿ ಹೇಳಿದರು.

                  ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಈ ಬಗ್ಗೆ ವಿವಾದ ಮಾಡುವುದು ಅನುಚಿತವೆಂದೂ ಖಾದರ್ ಭಾಗವಹಿಸಿದ್ದು  ಆರ್.ಎಸ್.ಎಸ್ ಕಾರ್ಯಕ್ರಮದಲ್ಲಿ ಅಲ್ಲ ಎಂದು ಹೇಳಿದ್ದಾರೆ. ಖಾದರ್ ಕೇಸರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆ.ಎನ್.ಎ.ಖಾದರ್ ಎಲ್ಲಿ ಭಾಗವಹಿಸಿದ್ದರೂ ಪರವಾಗಿಲ್ಲ, ಅವರು ಹೇಳಿದ್ದಷ್ಟೇ ಆಗಿದೆ ಎಂದರು.

                  ವಿವಾದಕ್ಕೆ ಹೆದರುವವರೇ ವಿವಾದ ಸೃಷ್ಟಿಸುತ್ತಾರೆ. ಒಂದು ವೇಳೆ ಲೀಗ್ ಕ್ರಮ ಕೈಗೊಂಡರೆ ವಿವಾದಕ್ಕೆ ಹೆದರುತ್ತದೆ ಎಂದರ್ಥ. ಕಾರ್ಯಕ್ರಮವೊಂದಕ್ಕೆ  ಹಾಜರಾಗುವುದು ಎಂದರೆ ಪಕ್ಷಕ್ಕೆ ಸೇರ್ಪಡೆಗೊಂಡರು ಎಂದರ್ಥವಲ್ಲ ಎಂದು ಎಂ.ಟಿ.ರಮೇಶ್ ಹೇಳಿರುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries