ಕುಂಬಳೆ: ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಐಕ್ಯರಂಗ ಹಾಗೂ ಬಿಜೆಪಿ ನಡೆಸುತ್ತಿರುವ ಸುಳ್ಳು ಪ್ರಚಾರಗಳನ್ನು ಬಯಲಿಗೆಳೆಯಲು ಸಿಪಿಐ(ಎಂ) ಕುಂಬಳೆ ಪ್ರಾದೇಶಿಕ ಸಮಿತಿ ವತಿಯಿಂದ ವಾಹನ ಪ್ರಚಾರ ಜಾಥಾ ಬ್ಲಾಕಿನ ವಿವಿಧೆಡೆ ನಡೆಯಿತು.
ಮುಂಡಿತಡ್ಕದಲ್ಲಿ ನಡೆದ ಕಾರ್ಯಕ್ರಮವನ್ನು ರಾಜ್ಯ ಸಮಿತಿ ಸದಸ್ಯ, ಶಾಸಕ ಸಿ.ಎಚ್ ಕುಞಂಬು ಉದ್ಘಾಟಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಾಥಾ ನಾಯಕ ವಿ.ವಿ.ರಮೇಶನ್, ಜಾಥಾ ವ್ಯವಸ್ಥಾಪಕ ಪಿ.ರಘುದೇವನ್ ಮಾಸ್ಟರ್, ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಸಿ.ಎ.ಜುಬೈರ್, ಶಂಕರ್ ರೈ ಮಾಸ್ಟರ್ ಉಪಸ್ಥಿತರಿದ್ದರು.
ಸ್ಥಳೀಯ ಸಮಿತಿ ಕಾರ್ಯದರ್ಶಿ ಸಂತೋಷ ಸ್ವಾಗತಿಸಿದರು. ನಂತರ ವಾಣೀನಗರದಿಂದ ಆರಂಭಗೊಂಡ ಜಾಥಾ ಕಾಟುಕುಕ್ಕೆ, ಪೆರ್ಲ, ಬೆದ್ರಂಪಳ್ಳದಲ್ಲಿ ಬಾಡೂರಿನಲ್ಲಿ ಸಮಾರೋಪಗೊಂಡಿತು.
ಸಿಪಿಎಂ ಕುಂಬಳೆ ಏರಿಯಾ ವಾಹನ ಪ್ರಚಾರ ಜಾಥ
0
July 27, 2022