HEALTH TIPS

ಎಕೆಜಿ ಕೇಂದ್ರದಲ್ಲಿ ಸಿಡಿಮದ್ದು ಎಸೆತ, ಚಿನ್ನ ಕಳ್ಳಸಾಗಣೆ ಪ್ರಕರಣಗಳು; ಅಸೆಂಬ್ಲಿಯಲ್ಲಿ ಕೇಳಿದ ಪ್ರಶ್ನೆಗಳನ್ನು ಮರೆಮಾಡಲು ಯತ್ನ: ಮುಖ್ಯಮಂತ್ರಿಯಿಂದ ನೇರ ಉತ್ತರ ಬರುವುದನ್ನು ತಪ್ಪಿಸಲು ಕ್ರಮ: ಆರೋಪ

            
             ತಿರುವನಂತಪುರ: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಉತ್ತರಿಸಬೇಕಾದ ಪ್ರಶ್ನೆಗಳನ್ನು ಬದಲಿಸಲಾಗಿದೆ ಎಂದು ದೂರಲಾಗಿದೆ. ನಕ್ಷತ್ರ ಮಾರ್ಕ್ ಹಾಕಿದ ಪ್ರಶ್ನೆಗಳನ್ನು ಸಭೆಯ ಮಟ್ಟದಲ್ಲಿ ಉತ್ತರಿಸಲು ಬದಲಾಯಿಸಲಾಗಿದೆ.
        ಎಕೆಜಿ ಕೇಂದ್ರದ ಮೇಲೆ ಸಿಡಿಮದ್ದು ಪ್ರಕರಣ ಮತ್ತು ಚಿನ್ನ ಕಳ್ಳಸಾಗಣೆ ಪ್ರಕರಣಗಳಿಗೆ ಸರ್ಕಾರ ಪ್ರಸ್ತುತ ನಿರುತ್ತರವಾಗಿದೆ. ಲಿಖಿತವಾಗಿ ಉತ್ತರ ನೀಡಬೇಕಾದ ವಿಭಾಗಕ್ಕೆ ದೂರನ್ನು ವರ್ಗಾಯಿಸಲಾಗಿದೆ. ಘಟನೆ ಸಂಬಂಧ ಎಪಿ ಅನಿಲ್ ಕುಮಾರ್ ಸ್ಪೀಕರ್ ಅವರಿಗೆ ದೂರು ಸಲ್ಲಿಸಿದ್ದಾರೆ.
        ಈ ವಿಚಾರವಾಗಿ ಪ್ರತಿಪಕ್ಷಗಳು ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದವು. ವಿವಾದಾತ್ಮಕ ವಿಷಯಗಳ ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡುವುದನ್ನು ಮುಖ್ಯಮಂತ್ರಿ ಉದ್ದೇಶಪೂರ್ವಕವಾಗಿ ತಪ್ಪಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದವು. ಎಕೆಜಿ ಸೆಂಟರ್‍ನಲ್ಲಿ ಸಿಡಿಮದ್ದು ಸಿಡಿಸಿದ ಪ್ರಕರಣ, ಚಿನ್ನ ಸಾಗಾಟ ಸಮಸ್ಯೆಗಳ ಜೊತೆಗೆ ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಕಾಪ್ಪ ಪ್ರಕರಣ ವಿಧಿಸಿರುವುದು ಸೇರಿದಂತೆ ವಿಷಯಗಳ 26 ಪ್ರಶ್ನೆಗಳನ್ನು ಬದಲಾಯಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries