ತಿರುವನಂತಪುರ: ಕಣ್ಣೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳು ತನ್ನ ವಿರುದ್ದ ಕೊಲೆ ನಡೆಸಲು ಸಂಚು ರೂಪಿಸಿದ್ದರು ಎಮದು ಗವರ್ನರ್ ಗಂಭೀರ ಆರೋಪ ಮಾಡಿದ್ದು, ವಿ.ಸಿ ದೂರು ದಾಖಲಾಗಿದೆ.
ವಿಶ್ವವಿದ್ಯಾಲಯದ ವಿ.ಸಿ. ಗೋಪಿನಾಥ್ ರವೀಂದ್ರನ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿತ್ತು. ಇಂಡಿಯನ್ ಲಾಯರ್ಸ್ ಕಾಂಗ್ರೆಸ್ ಅಧ್ಯಕ್ಷ ಅಡ್ವ: ಕೆವಿ ಮನೋಜ್ ಕುಮಾರ್ ಅವರು ದೂರು ದಾಖಲಿಸಿದ್ದಾರೆ. ಕಣ್ಣೂರು ಎಸ್ಪಿಗೆ ದೂರು ನೀಡಲಾಗಿದೆ. ರಾಜ್ಯಪಾಲರು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಮೊಕದ್ದಮೆ ಹೂಡುವಂತೆ ದೂರಿನಲ್ಲಿ ಕೋರಲಾಗಿದೆ.
ರಾಜ್ಯಪಾಲರು ಕಣ್ಣೂರು ವಿಸಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಉಪಕುಲಪತಿಗಳು ಕ್ರಿಮಿನಲ್ ನಂತಾಗಿದ್ದು ಸಭ್ಯತೆಯ ಎಲ್ಲೆಯನ್ನು ಮೀರಿದ್ದಾರೆ ಎಂದು ರಾಜ್ಯಪಾಲರು ಹೇಳುತ್ತಾರೆ. ವಿಸಿ ರಾಜ್ಯಪಾಲರ ವಿರುದ್ಧ ಹೋರಾಡಲು ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ರಾಜ್ಯಪಾಲರ ವಿರುದ್ಧ ಹತ್ಯೆ ಸಂಚು; ಕಣ್ಣೂರು ವಿಸಿ ವಿರುದ್ಧ ಪ್ರಕರಣ ದಾಖಲಿಸುವಂತೆ ಪೋಲೀಸರಿಗೆ ದೂರು
0
ಆಗಸ್ಟ್ 22, 2022





