HEALTH TIPS

ಜಿಲ್ಲೆಯಲ್ಲಿ ನೇಮಕಗೊಂಡ ಅಧಿಕಾರಿಗಳು ಇತರೆಡೆ ಕಾರ್ಯನಿರ್ವಹಿಸಲು ಅನುಮತಿಸಬಾರದು: ಜಿಲ್ಲಾ ಅಭಿವೃದ್ದಿ ಸಮಿತಿ ಸಭೆಯಲ್ಲಿ ಒತ್ತಾಯ


              ಕಾಸರಗೋಡು: ಜಿಲ್ಲೆಯಿಂದ ಉದ್ಯೋಗ ವ್ಯವಸ್ಥೆ ಮತ್ತಿತರ ಸೇವಾ ಷರತ್ತುಗಳ ಪ್ರಕಾರ ವರ್ಗಾವಣೆಗೊಂಡಿರುವ ನೌಕರರ ವರ್ಗಾವಣೆಯನ್ನು ಕೂಡಲೇ ರದ್ದುಪಡಿಸಿ ಹಿಂಪಡೆಯಬೇಕು ಎಂದು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳು ಒತ್ತಾಯಿಸಿದರು. ಈ ಕಾರಣಗಳಿಂದ ಹಲವು ಕಚೇರಿಗಳ ಕಾರ್ಯನಿರ್ವಹಣೆ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲಿ ಉದ್ಯೋಗ ವ್ಯವಸ್ಥೆಯಡಿ ಯಾವುದೇ ವರ್ಗಾವಣೆಗೆ ಅವಕಾಶವಿಲ್ಲ. ಇಲ್ಲಿಂದ ವೇತನ ಪಡೆದು ಸ್ವಂತ ಜಿಲ್ಲೆಯಲ್ಲಿ ಕೆಲಸ ಮಾಡುವ ವ್ಯವಸ್ಥೆ ಸರಕಾರದ ನಿರ್ದೇಶನಕ್ಕೆ ವಿರುದ್ಧವಾಗಿದ್ದು, ಇಲ್ಲಿ ನೌಕರರ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕರು ಆಗ್ರಹಿಸಿದರು.
          ಮೇಲ್ದರ್ಜೆಗೇರಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ಫುಟ್ ಪಾತ್ ಗಳ ಅವಶ್ಯಕತೆ ಇದೆ ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಹೇಳಿದರು. ಚೆರ್ಕಳ-ಚಟ್ಟಂಚಾಲ್ ಭಾಗದಲ್ಲಿ ಸರ್ವಿಸ್ ರಸ್ತೆಗೆ ಹೆಚ್ಚಿನ ಜಾಗ ನೀಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವದ್ಧಿ ಕುರಿತು ಜನರಿಗಿರುವ ಸಮಸ್ಯೆ ನಿವಾರಣೆಗೆ ಯೋಜನೆಯ ಸಂಪೂರ್ಣ ಮಾಹಿತಿ ಲಭ್ಯವಾಗುವಂತೆ ಮಾಡಬೇಕು ಎಂದು ಶಾಸಕರು ತಿಳಿಸಿದರು. ಕಾಸರಗೋಡು ಮಿನಿ ಸಿವಿಲ್ ಸ್ಟೇಷನ್ ನಿರ್ಮಾಣಕ್ಕೆ ಸಾಕಷ್ಟು ಸಮಯ ಹಿಡಿಯುತ್ತಿದೆ ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ತಿಳಿಸಿದರು. 2018-19ನೇ ಸಾಲಿನ ಆಯವ್ಯಯದಲ್ಲಿ 7 ಕೋಟಿ ಅನುದಾನ ಮೀಸಲಿಟ್ಟಿದ್ದು, ಅದಕ್ಕೆ ಅನುಗುಣವಾಗಿ ಅಂದಾಜು ಪಟ್ಟಿ ತಯಾರಿಸಿ ಮುಂದಿನ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುವಂತೆ  ಪಟ್ಟಿ ತಯಾರಿಸಬೇಕು ಎಂದು ಶಾಸಕರು ತಿಳಿಸಿದರು. ಯೋಜನಾ ನಿಧಿಯಲ್ಲಿ ನಿಗದಿಪಡಿಸಿದ ಮೊತ್ತಕ್ಕೆ ಅನುಗುಣವಾಗಿ ಕಾಸರಗೋಡು ಶೈಕ್ಷಣಿಕ ಸಂಕೀರ್ಣಕ್ಕೆ ಅಂದಾಜು ಪಟ್ಟಿ ತಯಾರಿಸಿಕೊಡುವಂತೆ ತಿಳಿಸಿದರು. ಸ್ವಾಧೀನಪಡಿಸಿಕೊಳ್ಳಲು ವ್ಯಕ್ತಿಗಳು ನೀಡಿದ ಜಮೀನನ್ನು ಪಂಚಾಯಿತಿಗಳಿಗೆ ನೋಂದಣಿ ಮಾಡಿಸುವ ಹೊಣೆಗಾರಿಕೆಯಿಂದ ಭೂಮಾಲೀಕರಿಗೆ ತೊಂದರೆಯಾಗುತ್ತದೆ ಎಂದು ಶಾಸಕರು ಹೇಳಿದರು. ಹೀಗೆ ಒದಗಿಸಿದ ಜಾಗವನ್ನು ಸ್ಥಾಪಿಸಲು ತಗಲುವ ವೆಚ್ಚವನ್ನು ಪಂಚಾಯಿತಿಗಳು ಭರಿಸಲಿವೆ ಎಂದು ಸ್ಥಳೀಯಾಡಳಿತ  ಇಲಾಖೆಯ ಪ್ರತಿನಿಧಿ ಮಾಹಿತಿ ನೀಡಿದರು.
           ಶಾಸಕ ಇ.ಚಂದ್ರಶೇಖರನ್ ಮಾತನಾಡಿ, ಯಾವುದೇ ಯೋಜನೆ ಘೋಷಣೆ ಮಾಡಿದರೂ ಅದಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ವಿಳಂಬವಾಗುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಪ್ರತಿ ಯೋಜನೆಗೆ ಹಣ ಮೀಸಲಿಟ್ಟರೂ ನಿರ್ಮಾಣ ಕಾಮಗಾರಿ ವಿಳಂಬವಾಗುವುದು ಸಾಮಾನ್ಯ. ಎಡಮೋಟ್ - ನೀಲೇಶ್ವರ ರಸ್ತೆ ಕಾಮಗಾರಿ ಪೂರ್ಣಗೊಳಿಸುವಲ್ಲಿ ಆಗುತ್ತಿರುವ ವಿಳಂಬ ಗಂಭೀರವಾಗಿದೆ. ಹೊಸದುರ್ಗ ಕೋಟೆಯನ್ನು ಪುರಾತತ್ವ ಸ್ಮಾರಕವಾಗಿ ಸಂರಕ್ಷಿಸಬೇಕು ಎಂದು  ಹೇಳಿದರು. ಕಾಸರಗೋಡು-ಕಾಞಂಗಾಡು ರಾಜ್ಯ ಹೆದ್ದಾರಿಯ ಪಳ್ಳಿಕ್ಕೆರೆ ಮೇಲ್ಸೇತುವೆಯಲ್ಲಿನ ಗುಂಡಿಗಳನ್ನು ತುಂಬಬೇಕು. ಖಾಸಗಿ ಬಸ್ ನಲ್ಲಿ ಕಾಞಂಗಾಟ್ ಗೆ ಹೋಗುವವರು ಹಳೆ ಬಸ್ ನಿಲ್ದಾಣದಲ್ಲಿ ಇಳಿಯಬೇಕು. ಅಲಮಿಪಳ್ಳಿ ಹೊಸ ಬಸ್ ನಿಲ್ದಾಣದವರೆಗೆ ಖಾಸಗಿ ಬಸ್ ಗಳನ್ನು ವಿಸ್ತರಿಸಬೇಕು. ಬಸ್‍ಗಳು ನೀಲೇಶ್ವರ ಬಸ್ ನಿಲ್ದಾಣಕ್ಕೆ ಪ್ರವೇಶಿಸದೆ ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗುತ್ತಿದ್ದು, ಇದನ್ನು ತಡೆಯಲು ಆರ್‍ಟಿಎ ಸಭೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಆಗ್ರಹಿಸಿದರು. ಜೀವನಶೈಲಿ ರೋಗಗಳು ಹೆಚ್ಚಾಗುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಶಿಥಿಲಗೊಂಡಿರುವ ರಸ್ತೆಗಳು, ಸೇತುವೆಗಳನ್ನು ಆದಷ್ಟು ಬೇಗ ದುರಸ್ತಿಗೊಳಿಸಬೇಕು ಎಂದು ಸೂಚಿಸಲಾಗಿದೆ.
            ಕೆಎಸ್‍ಆರ್‍ಟಿಸಿ ಲಾಭದಾಯಕ ಮಾರ್ಗಗಳಲ್ಲಿ ಮಾತ್ರ ಸೇವೆ ಸಲ್ಲಿಸುವ ವಿಧಾನ ಸರಿಯಲ್ಲ, ಎಲ್ಲ ವರ್ಗದ ಜನರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು. ನಷ್ಟದ ಮಾರ್ಗದಲ್ಲಿ ಸೇವೆ ನಡೆಸಲು ಇಚ್ಛಿಸುವವರಿಗೆ ಮಾತ್ರ ಲಾಭದಾಯಕ ಮಾರ್ಗದಲ್ಲಿ ಓಡಿಸಲು ಆದ್ಯತೆ ನೀಡಬೇಕು ಮತ್ತು ಮುಂದಿನ ಆರ್‍ಟಿಎ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಯಿತು.
         ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪ್ರಿ ಫ್ಯಾಬ್ರಿಕೇಟೆಡ್ ಮಾದರಿಯ ಟಿಬಿ ಸೆಂಟರ್ ನಿರ್ಮಾಣವನ್ನು ಕೂಡಲೇ ಆರಂಭಿಸಬೇಕು. ಇಲ್ಲಿ ಐಸೊಲೇಶನ್ ವಾರ್ಡ್ ಕೂಡ ಸಿದ್ಧಪಡಿಸಬೇಕು. ಆಸ್ಪತ್ರೆ ಆವರಣದಲ್ಲಿ ಸೌಲಭ್ಯವಿಲ್ಲದಿದ್ದರೆ ಹೊರಗೆ ಸೂಕ್ತ ಸ್ಥಳ ಹುಡುಕಬೇಕು. ಆದಷ್ಟು ಬೇಗ ಜನರಲ್ ಆಸ್ಪತ್ರೆಯಲ್ಲಿ ರಾತ್ರಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಫೆÇೀರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ಸಹಾಯಕ ಶಸ್ತ್ರಚಿಕಿತ್ಸಕರನ್ನು ನೇಮಿಸಲಾಗಿದೆ.
            ಬೀದಿನಾಯಿ ತಡೆಗಾಗಿ ಮಂಗಲ್ಪಾಡಿ, ಮುಳಿಯಾರ್ ಮತ್ತು ಒಡಯಂಚಾಲ್ ನಲ್ಲಿ ಎಬಿಸಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದರು. ಪ್ರತಿರಕ್ಷಣೆಗಾಗಿ ಯೋಜನೆ ಪ್ರಾರಂಭವಾಗಿದೆ.  ಅಗತ್ಯ ಬಿದ್ದರೆ ನಾಯಿ ಹಿಡಿಯುವ ಕುರಿತು ವಿಶೇಷ ತಂಡಕ್ಕೆ ತರಬೇತಿ ನೀಡಿ ನಿಯೋಜಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ತಿಳಿಸಿದರು. ಜಿಲ್ಲೆಯಲ್ಲಿ ಲೈವ್ ಸ್ಟಾಕ್ ಇನ್ಸ್ ಪೆಕ್ಟರ್ ಗಳ ಕೊರತೆ ನೀಗಿಸಬೇಕು ಎಂದೂ ಸೂಚಿಸಲಾಗಿದೆ. ಜಿಲ್ಲೆಯ ಎಲ್ಲಾ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ಸಾಕುಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯವಿದೆ. ಸಿಬ್ಬಂದಿ ಕೊರತೆಯಿಂದ ಪಶು ಉಪಕೇಂದ್ರಗಳಿಗೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾ ಪಶು ಕಲ್ಯಾಣಾಧಿಕಾರಿ ಮಾಹಿತಿ ನೀಡಿದರು.

        ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಸ್ ಪಾದೂರು, ಕಾಞಂಗಾಡು ನಗರಸಭೆ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ, ಜಿಲ್ಲಾ ಯೋಜನಾಧಿಕಾರಿ ಎ.ಎಸ್.ಮಾಯಾ, ಎಡಿಎಂ ಎ.ಕೆ.ರಾಮೇಂದ್ರನ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇμÁಧಿಕಾರಿ ಇ.ಪಿ.ರಾಜಮೋಹನ್, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries