ಕಾಸರಗೋಡು: 2023-24ನೇ ಹಣಕಾಸು ವರ್ಷದಲ್ಲಿ ಜಿಲ್ಲಾ ಪಂಚಾಯತ್ ರೂಪೀಕರಿಸುವvಯೋಜನೆ ಗಳ ಕುರಿತು ವಿವಿಧ ಕಾರ್ಯನಿರತ ಗುಂಪುಗಳು ಮಂಡಿಸಿದ ಪ್ರಸ್ತಾವನೆಗಳ ಬಗ್ಗೆ ಆಡಳಿತ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು. ಫೆಬ್ರವರಿ 9 ರಂದು ನಡೆಯುವ ಅಭಿವೃದ್ಧಿ ವಿಚಾರ ಸಂಕಿರಣದಲ್ಲಿ ಯೋಜನೆ ಗೆ ಅಂತಿಮ ರೂಪ ನೀಡಲಾಗುತ್ತದೆ. ಕಾಸರಗೋಡು ನಗರ ಸಭಾ ಭವನದಲ್ಲಿ ನಡೆಯುವ ಅಭಿವೃದ್ಧಿ ವಿಚಾರ ಸಂಕಿರಣವನ್ನು ರಾಜ್ಯ ಯೋಜನಾ ಮಂಡಳಿ ಸದಸ್ಯ ಜಿಜು ಪಿ. ಅಲೆಕ್ಸ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯತ್ ದರ್ಪಣಂ ಯೋಜನೆ ಮೂಲಕ ವೃತ್ತಿ ಕೌಶಲ್ಯ ತರಬೇತಿ ಪೂರ್ಣಗೊಳಿಸಿದವರಿಗೆ ಶ್ರೀ ನಾರಾಯಣ ಮುಕ್ತ ವಿಶ್ವವಿದ್ಯಾನಿಲಯದ ಉಪಕುಲಪತಿ ಮುಬಾರಕ್ ಪಾμÁ ಅವರು ಪ್ರಮಾಣ ಪತ್ರ ವಿತರಿಸುವರು. ಫೆಬ್ರವರಿ 1ರಂದು ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಚಲಚಿತ್ರೋತ್ಸವ ನಡೆಯಲಿದೆ. ಚಲನಚಿತ್ರೋತ್ಸವ ಸ್ಥಳೀಯವಾಗಿ ನಡೆಸುವ ಸಂಘಟಕರಿಗೆ ಐದು ಸಾವಿರ ರೂಪಾಯಿ ನೀಡಲಾಗುವುದು.
ಜಿಲ್ಲಾ ಪಂಚಾಯತ್ ರಸ್ತೆಗಳ ಶೋಚ ನೀಯ ಅವಸ್ಥೆಯನ್ನು ಪರಿಶೀಲಿಸಿ ಯೋಜನೆಗೆ ನಿರ್ದೇಶನ ನೀಡಲು ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ವಹಿಸಲಾಗಿದೆ. ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಶಾಲೆಗಳಲ್ಲಿ ಕುಡಿಯುವ ನೀರಿನ ಯೋಜನೆ, ಕಾಸರಗೋಡು ಜಿಲ್ಲೆಯನ್ನು ಸಂಪೂರ್ಣ ವಾಗಿ ಮಾಲಿನ್ಯ ಮುಕ್ತಗೊಳಿಸಲು ಝೀರೋ ತ್ಯಾಜ್ಯ ಯೋಜನೆಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ನಡೆಸುವ ಉದ್ಯೋಗ ಸಭೆಯಲ್ಲಿ ಭಾಗವಹಿಸುವ ಒಂದು ಸಾವಿರ ಮಹಿಳೆಯರಿಗೆ ಅಸಾಪ್ ಸಹಯೋಗದಲ್ಲಿ ಒಂದು ವಾರದ ಕರಿಯರ್ ಗ್ರೂಮಿಂಗ್ ಸೆಷನ್ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಆಡಳಿತ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ವಹಿಸಿದ್ದರು. ಉಪಾಧ್ಯಕ್ಷ ಶಾನವಾಸ್ ಪಾದೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಗೀತಾ ಕೃಷ್ಣನ್, ಅಡ್ವ .ಎಸ್ .ಎನ್. ಸರಿತಾ, ಕೆ. ಶಕುಂತಲಾ, ಶಿನೋಜ್ ಚಾಕೋ, ಜಿಲ್ಲಾ ಪಂಚಾಯ ತ್ ಸದಸ್ಯರಾದ ಸಿ. ಜೆ. ಸಜಿತ್, ಜೋಮೊನ್ ಜೋಸ್, ಎಂ. ಮನು, ಬಿ. ಎಚ್. ಫಾತಿಮಾ ಶಮ್ನಾ, ಜಾಸ್ಮಿನ್ ಕಬೀರ್, ಜಮೀಲಾ ಸಿದ್ದಿಕ್ ದಂಡೆಗೋಳಿ, ಪಿ ಬಿ ಶೆಫೀಕ್, ನಾರಾಯಣ ನಾಯ್ಕ್, ಕೆ. ಕಮಲಾಕ್ಷಿ, ಜಿಲ್ಲಾ ಪಂಚಾಯತ್ ಹಣಕಾಸು ಅಧಿಕಾರಿ ಎ. ಅಶ್ರಫ್ ಸ್ವಾಗತಿಸಿದರು.
ಜಿಲ್ಲಾ ಪಂಚಾಯತಿ ಆಡಳಿತ ಸಮಿತಿ ಸಭೆ: ಅಭಿವೃದ್ಧಿ ವಿಚಾರ ಸಂಕಿರಣದಲ್ಲಿ ಯೋಜನೆಗೆ ಅಂತಿಮ ರೂಪ
0
January 30, 2023