HEALTH TIPS

ಕುಡಿದು ವಾಹನ ಚಾಲನೆ; ರಾಜ್ಯದಲ್ಲಿ ಪೋಲೀಸರು ನಡೆಸಿದ ವ್ಯಾಪಕ ತನಿಖೆಯಲ್ಲಿ ಒಟ್ಟು 3764 ಪ್ರಕರಣಗಳು ದಾಖಲು


                 ತಿರುವನಂತಪುರ: ಕುಡಿದು ವಾಹನ ಚಲಾಯಿಸುವವರನ್ನು ಪತ್ತೆ ಹಚ್ಚಲು ರಾಜ್ಯಾದ್ಯಂತ ಪೋಲೀಸರು ನಡೆಸಿದ ವಿಶೇಷ ತನಿಖೆಯ ನಂತರ 3764 ಪ್ರಕರಣಗಳು ದಾಖಲಾಗಿವೆ.
           1911 ಜನರ ಚಾಲನಾ ಪರವಾನಗಿ ರದ್ದುಪಡಿಸಿ, 894 ಜನರ ಚಾಲನಾ ಪರವಾನಗಿ ಜಪ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
             ಸಂಚಾರ ವಿಭಾಗದ ಐ.ಜಿ.ಎ. ಅಕ್ಬರ್ ಅವರ ಸೂಚನೆ ಮೇರೆಗೆ ಫೆ.6ರಿಂದ 12ರವರೆಗೆ ಜಿಲ್ಲಾ ಪೋಲೀಸ್ ವರಿರ್ಷಠಾಧಿಕಾರಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ತಪಾಸಣೆ ನಡೆಸಲಾಗಿತ್ತು. ಈ ಅವಧಿಯಲ್ಲಿ ತ್ರಿಶೂರ್ ನಗರದಲ್ಲಿ ಅತಿ ಹೆಚ್ಚು ಕುಡಿದು ವಾಹನ ಚಾಲನೆ ಪ್ರಕರಣಗಳು 538 ದಾಖಲಾಗಿವೆ. ಕೊಚ್ಚಿ ನಗರದಲ್ಲಿ 342 ಪ್ರಕರಣಗಳು ಮತ್ತು ಆಲಪ್ಪುಳದಲ್ಲಿ 304 ಪ್ರಕರಣಗಳು ದಾಖಲಾಗಿವೆ. ತಿರುವನಂತಪುರಂ ನಗರದಲ್ಲಿ ಅತಿ ಕಡಿಮೆ ಪ್ರಕರಣಗಳು ದಾಖಲಾಗಿದ್ದು, ಏಳು ಪ್ರಕರಣಗಳು ದಾಖಲಾಗಿವೆ. ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಎಲ್ಲಾ ಜಿಲ್ಲೆಗಳಲ್ಲಿ ಇಂತಹ ತಪಾಸಣೆ ಮುಂದುವರಿಯಲಿದೆ ಎಂದು ಸಂಚಾರ ಐಜಿ ತಿಳಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries