ಮುಳ್ಳೇರಿಯ: ಆದೂರು ಗ್ರಾಮದ ಕಾನಕ್ಕೋಡು ಶ್ರೀವನ ಶಾಸ್ತಾರ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿಯ ಮಹಾಸಭೆ ಮತ್ತು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ರೂಪೀಕರಿಸಿದ ವಿವಿಧ ಉಪಸಮಿತಿಗಳ ವಿಸರ್ಜನಾ ಕಾರ್ಯಕಮ ಶಿವರಾತ್ರಿಯ ದಿನ ನಡೆಯಿತು.
ಸಭೆಯಲ್ಲಿ ಸೇವಾ ಸಮಿತಿ ಅಧ್ಯಕ್ಷ ಭಾಸ್ಕರ ಮಣಿಯಾಣಿ ಕೋಳಿಕ್ಕಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು ಕಾರ್ಯದರ್ಶಿ ಶ್ರೀ ದೇವಾನಂದ ಶೆಟ್ಟಿ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷ ಕುಂಞÂರಾಮ ಮಣಿಯಾಣಿ ಎಡತೋಡು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಪಸಮಿತಿ ಪದಾಧಿಕಾರಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ನಾರಾಯಣ ಐ ಸ್ವಾಗತಿಸಿ, ಕೃಷನ್ zವಂದಿಸಿದರು. ಶಿವರಾತ್ರಿಯ ಪ್ರಯುಕ್ತ ಶ್ರೀಸನ್ನಿಧಿಯಲ್ಲಿ ವಿವಿಧ ಭಜನಾ ಸಂಘಗಳಿಂದ ಭಜನಾ ಸೇವೆ, ಮಹಾಪೂಜೆ ನಡೆದು ಅನ್ನದಾನ ನೆರವೇರಿತು.
ಕಾನಕ್ಕೋಡು ಶ್ರೀವನ ಶಾಸ್ತಾರ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿಗಳ ವಿಸರ್ಜನೆ
0
February 22, 2023