HEALTH TIPS

ಕಣ್ಣೂರಿನ ಒಂದೂವರೆ ಎಕರೆ ಪ್ರದೇಶದಲ್ಲಿ ಐದು ಮೀಟರ್ ಆಳದ ಬಿರುಕು: ಮೂಡಿದ ಆತಂಕ


            ಕಣ್ಣೂರು: ಕಣ್ಣೂರಿನ ಕ್ವಾರಿ ಸಮೀಪದ ಜಮೀನಿನಲ್ಲಿ ಬಿರುಕು ಕಾಣಿಸಿಕೊಂಡಿದೆ.  ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಬಿರುಕು ಕಂಡು ಬಂದಿದೆ.
             ಈ ಪ್ರದೇಶವು ಕಲ್ಲುಗಣಿಗಾರಿಕೆಗೆ ಸಮೀಪದಲ್ಲಿರುವುದರಿಂದ ಗುಡ್ಡ ಮತ್ತು ಬೃಹತ್ ಬಂಡೆಗಳ ಚೂರುಗಳು ಯಾವುದೇ ಕ್ಷಣದಲ್ಲಿ ನೆಲಕ್ಕೆ ಬೀಳುವ ಸ್ಥಿತಿಯಲ್ಲಿವೆ. ಬಿರುಕು ಬಿಟ್ಟಿರುವುದನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ.
           ಕ್ವಾರಿಯ ಮೇಲೆ ಸುಮಾರು ಒಂದು ಕಿಲೋಮೀಟರ್ ಉದ್ದ ಮತ್ತು ಐದು ಮೀಟರ್ ಆಳದಲ್ಲಿ ಬಿರುಕು ಇದೆ. ಈ ಪ್ರದೇಶದಲ್ಲಿ ಬಿರುಕು ಉಂಟಾಗಿ ಅರ್ಧ ಎಕರೆಯಷ್ಟು ಮಣ್ಣು ಹಾಗೂ ಕಲ್ಲಿನ ಚೂರುಗಳು ಕ್ವಾರಿಗೆ ಬಿದ್ದಿವೆ. ಭೂಮಿ ಬಿರುಕು ಬಿಟ್ಟಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
           ಕ್ವಾರಿ ಇರುವ ಪ್ರದೇಶವನ್ನು ಅತ್ಯಂತ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಸೇರಿಸಲಾಗಿದೆ. ಹಾಗಾಗಿ ಕ್ವಾರೆಗೆ ಅನುಮತಿ ನೀಡುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. 2008ರಿಂದ ಈ ರೀತಿಯ ಕ್ವಾರಿ ಕಾರ್ಯಾಚರಣೆಗೆ ಅನುಮತಿಸಲಾಗಿದೆ. ಕ್ವಾರಿಯ ಮೇಲೆ ಸುಮಾರು ಒಂದು ಕಿಲೋಮೀಟರ್ ಉದ್ದ ಮತ್ತು ಐದು ಮೀಟರ್ ಆಳದಲ್ಲಿ ಬಿರುಕು ಇದೆ. ಕ್ವಾರಿ ಕಾರ್ಯಾಚರಣೆಯನ್ನು ಪ್ರಸ್ತುತ ಸ್ಥಗಿತಗೊಳಿಸಲಾಗಿದೆ.
            ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ನಿಂತು ಇಡೀ ಗುಡ್ಡವೇ ಉರುಳಿ ಬೀಳುವ ಆತಂಕ ಸ್ಥಳೀಯರದ್ದು. ಕರುವಾಂಚಲ್, ವೆಳ್ಳಾಡ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಸಾವಿರ ಕುಟುಂಬಗಳು ವಾಸವಾಗಿವೆ. ಕ್ವಾರಿಯ ಸುತ್ತ ಬಿರುಕು ಬಿಟ್ಟಿದ್ದು, ಅವರ ಜೀವ ಮತ್ತು ಜಮೀನಿಗೆ ಅಪಾಯವಿದೆ.
        ಭೂವಿಜ್ಞಾನ ಇಲಾಖೆ ಹಾಗೂ ಪರಿಸರ ಇಲಾಖೆ ಈ ಹಿಂದೆ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿತ್ತು. ಯಾವುದೇ ಸಮಯದಲ್ಲಿ ಭೂಕುಸಿತ ಸಂಭವಿಸುವ ಅಪಾಯವಿರುವ ಅತ್ಯಂತ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿದ್ದು ಹೇಗೆ ಎಂಬ ಪ್ರಶ್ನೆಗಳೂ ಎದ್ದಿವೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries