HEALTH TIPS

ಬೇಸರವೇ, ಖಿನ್ನತೆಯೇ, ತಿಳಿಯುವುದು ಹೇಗೆ? ಖಿನ್ನತೆ ಮಾತ್ರ ನಿರ್ಲಕ್ಷ್ಯ ಮಾಡಲೇಬೇಡಿ

 ಮನಸ್ಸಿಗೆ ಬೇಸರ, ಯಾವುದಕ್ಕೂ ಆಸಕ್ತಿಯಿಲ್ಲ , ಯಾರ ಜೊತೆ ಬೆರೆಯಬೇಕೆಂದು ಅನಿಸುತ್ತಿಲ್ಲ, ಒಂಟಿಯಾಗಿ ಇದ್ದು ಬಿಡುವ ಅನಿಸುತ್ತೆ, ಹಾಗಾದರೆ ಈ ರೀತಿಯೆಲ್ಲಾ ಅನಿಸುತ್ತಿರುವುದು ಖಿನ್ನತೆಯ ಲಕ್ಷಣವೇ? ಅಥವಾ ಬೇಸರವೇ ಮತ್ತೆ ಹಚ್ಚುವುದು ಹೇಗೆ ಎಂದು ನೋಡೋಣ ಬನ್ನಿ?

ಮನಸ್ಸಿಗೆ ಬೇಸರ, ಯಾವುದಕ್ಕೂ ಆಸಕ್ತಿಯಿಲ್ಲ , ಯಾರ ಜೊತೆ ಬೆರೆಯಬೇಕೆಂದು ಅನಿಸುತ್ತಿಲ್ಲ, ಒಂಟಿಯಾಗಿ ಇದ್ದು ಬಿಡುವ ಅನಿಸುತ್ತೆ, ಹಾಗಾದರೆ ಈ ರೀತಿಯೆಲ್ಲಾ ಅನಿಸುತ್ತಿರುವುದು ಖಿನ್ನತೆಯ ಲಕ್ಷಣವೇ? ಅಥವಾ ಬೇಸರವೇ ಮತ್ತೆ ಹಚ್ಚುವುದು ಹೇಗೆ ಎಂದು ನೋಡೋಣ ಬನ್ನಿ?

* ಚಿಂತೆಯಾಗುವುದು
* ದುಃಖವಾಗುವುದು
* ಸುಸ್ತು ಅನಿಸುವುದು
* ಬೇಗನೆ ಕೋಪ ಬರುತ್ತದೆ
* ಒಂಥರಾ ಫ್ರಸ್ಟ್ರೇಷನ್ ಉಂಟಾಗುವುದು
* ಆತ್ಮ ವಿಶ್ವಾಸ ಕಡಿಮೆಯಾಗುವುದು
* ಮಾನಸಿಕ ಒತ್ತಡ ಅಧಿಕವಾಗುವುದು.

ಈ ಬಗೆಯ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವರು ಚಿಕ್ಕ ಕಾರಣಕ್ಕೆ ತುಂಬಾ ಸಮಯ ಬೇಸರ ಪಟ್ಟರೆ, ಇನ್ನು ಕೆಲವರು ಆ ಬೇಸರದಿಂದ ಬೇಗನೆ ಹೊರಬರಬಹುದು.

ಬೇಸರವಾಗಿದೆ ಎಂದಾಗ ಅದು ಶಾಶ್ವತವಲ್ಲ, ಅದರಿಂದ ಹೊರಬಂದೇ ಬರುತ್ತೇವೆ. ಜೋರಾಗಿ ಅತ್ತು ಬಿಟ್ಟರೆ ನಮ್ಮ ಮನಸ್ಸಿನ ನೋವು ಕಡಿಮೆಯಾಗುವುದು. ಇನ್ನು ನಮ್ಮ ಮನಸ್ಸಿಗೆ ಬೇಸರವಾದಾಗ ನಮ್ಮ ಆಪ್ತರಿಗೆ ನಮ್ಮ ಬೇಸರಕ್ಕೆ ಕಾರಣವೇನು ಎಂಬುವುದು ಕೂಡ ಗೊತ್ತಿರುತ್ತದೆ. ಅವರಿಂದ ಸಾಂತ್ವಾನ ಮಾತುಗಳು ಬಂದಾಗ ಮನಸ್ಸಿಗೆ ಸ್ವಲ್ಪ ಸಮಧಾನ ಅನಿಸುವುದು.

ಮನುಷ್ಯ ತುಂಬಾ ದುಃಖದಲ್ಲಿದ್ದಾಗ ಅವನಿಗೆ ಯಾವ ವಿಷಯಗಳಲ್ಲೂ ಹೆಚ್ಚು ಆಸಕ್ತಿ ಇರಲ್ಲ, ತಮ್ಮ ದಿನನಿತ್ಯದ ಕೆಲಸ ಕಾರ್ಯಗಳ ಕಡೆ ಗಮನ ನೀಡುವುದಿಲ್ಲ. ಅವರನ್ನು ನೋಡಿದಾಗ ಅವರ ಬದುಕಿನಲ್ಲಿ ಎಲ್ಲವೂ ಸರಿಯಿಲ್ಲ ಎಂದನಿಸಲಾರಂಭಿಸುವುದು.

ಖಿನ್ನತೆ ಎಂದರೇನು?

ಬೇಸರವಾಗಿದೆ ಎಂದಾಗ ಅದು ಶಾಶ್ವತವಲ್ಲ, ಅದರಿಂದ ಹೊರಬಂದೇ ಬರುತ್ತೇವೆ. ಜೋರಾಗಿ ಅತ್ತು ಬಿಟ್ಟರೆ ನಮ್ಮ ಮನಸ್ಸಿನ ನೋವು ಕಡಿಮೆಯಾಗುವುದು. ಇನ್ನು ನಮ್ಮ ಮನಸ್ಸಿಗೆ ಬೇಸರವಾದಾಗ ನಮ್ಮ ಆಪ್ತರಿಗೆ ನಮ್ಮ ಬೇಸರಕ್ಕೆ ಕಾರಣವೇನು ಎಂಬುವುದು ಕೂಡ ಗೊತ್ತಿರುತ್ತದೆ. ಅವರಿಂದ ಸಾಂತ್ವಾನ ಮಾತುಗಳು ಬಂದಾಗ ಮನಸ್ಸಿಗೆ ಸ್ವಲ್ಪ ಸಮಧಾನ ಅನಿಸುವುದು.

ಮನುಷ್ಯ ತುಂಬಾ ದುಃಖದಲ್ಲಿದ್ದಾಗ ಅವನಿಗೆ ಯಾವ ವಿಷಯಗಳಲ್ಲೂ ಹೆಚ್ಚು ಆಸಕ್ತಿ ಇರಲ್ಲ, ತಮ್ಮ ದಿನನಿತ್ಯದ ಕೆಲಸ ಕಾರ್ಯಗಳ ಕಡೆ ಗಮನ ನೀಡುವುದಿಲ್ಲ. ಅವರನ್ನು ನೋಡಿದಾಗ ಅವರ ಬದುಕಿನಲ್ಲಿ ಎಲ್ಲವೂ ಸರಿಯಿಲ್ಲ ಎಂದನಿಸಲಾರಂಭಿಸುವುದು.

ವ್ಯಕ್ತಿಗೆ ಖಿನ್ನತೆವಿದ್ದಾಗ ಎಷ್ಟೋ ಬಾರಿ ಅವರ ಜೊತೆಗಿದ್ದವರಿಗೇ ತಿಳಿಯುವುದಿಲ್ಲ, ತಮ್ಮ ಪಾಡಿಗೆ ತಾವು ಇರುತ್ತಾರೆ, ನಗುತ್ತಾರೆ, ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಿರುತ್ತಾರೆ, ಅವರಲ್ಲಿ ಖಿನ್ನತೆಯ ಸುಳಿವು ಎಷ್ಟೋ ಬಾರಿ ಸಿಗುವುದೇ ಇಲ್ಲ, ಈ ಕಾರಣಕ್ಕೆ ಖಿನ್ನತೆ ಇರುವವರು ಸೂಕ್ತ ಚಿಕಿತ್ಸೆ ಪಡೆಯದೆ ತಮ್ಮ ಬದುಕಿಗೆ ಅಂತ್ಯವಾಡುತ್ತಾರೆ. ಮನೆಯವರಿಗೆ ಚಿಕ್ಕ ಕ್ಲೂ ಸಿಕ್ಕರೆ ಖಿನ್ನತೆಗೆ ಚಿಕಿತ್ಸೆ ಕೊಡಿಸಬಹುದು ಆದರೆ ಎಷ್ಟೋ ಬಾರಿ ಗೊತ್ತೇ ಆಗುವುದಿಲ್ಲ.

ಖಿನ್ನತೆ ಉಂಟಾದಾಗ ಈ ಬಗೆಯ ಲಕ್ಷಣಗಳು ಕಂಡು ಬರುವುದು

* ಮನಸ್ಸಿಗೆ ಒಂಥರಾ ಬೇಸರ
* ಯಾವುದೇ ವಿಷಯದಲ್ಲಿ ಆಸಕ್ತಿ ಇಲ್ಲದಿರುವುದು
* ಅತಿಯಾದ ನಿದ್ದೆ ಅಥವಾ ಅತೀ ಕಡಿಮೆ ನಿದ್ದೆ
* ಯಾವುದೇ ಭರವಸೆ ಇಲ್ಲದಿರುವುದು
* ಒತ್ತಡ, ಕೋಪ, ಮನಸ್ಸಿಗೆ ತುಂಬಾ ಕಿರಿಕಿರಿ ಅನಿಸುವುದು
* ದೇಹದಲ್ಲಿ ಶಕ್ತಿ ಕಡಿಮೆಯಾದಂತೆ ಅನಿಸುವುದು
* ಹಸಿವು ಕಡಿಮೆಯಾಗುವುದು
* ಆತ್ಮಹತ್ಯೆಯ ಆಲೋಚನೆ ಬರುವುದು

ಖಿನ್ನತೆ ಬಂದರೆ ಅದು ತುಂಬಾ ಸಮಯದವರೆಗೆ ಕಾಡಬಹುದು, ಕೆಲವರಿಗೆ ವಾರಗಟ್ಟಲೆ ಇದ್ದರೆ ಇನ್ನು ಕೆಲವರಿಗೆ ವರ್ಷಗಟ್ಟಲೆ ಇರುತ್ತದೆ. ಖಿನ್ನತೆ ಇದೆ ಎಂದು ಅನಿಸಿದಾಗ ಅಥವಾ ಜೊತೆಯಲ್ಲೇ ಇದ್ದವರಿಗೆ ಈ ವ್ಯಕ್ತಿಗೆ ಖಿನ್ನತೆ ಇದೆ ಎಂದು ಅನಿಸಿದಾಗ ಸೂಕ್ತ ಚಿಕಿತ್ಸೆ ಕೊಡಿಸಿದರೆ ಖಿನ್ನತೆ ಕಡಿಮೆಯಾಗುವುದು, ಚಿಕಿತ್ಸೆ ಕೊಡಿಸದೇ ಹೋದರೆ ಅವರ ಪ್ರಾಣಕ್ಕೆ ಅಪಾಯ ತಂದುಕೊಳ್ಳಬಹುದು.

ಬೇಸರಕ್ಕಿಂತ ಖಿನ್ನತೆ ತುಂಬಾನೇ ಅಪಾಯಕಾರಿ. ಕೆಲವರಿಗೆ ಖಿನ್ನತೆಗೆ ಕಾರಣವೇನು ಎಂಬುವುದು ಕೂಡ ತಿಳಿದಿರುವುದಿಲ್ಲ. ಚೆನ್ನಾಗಿಯೇ ಇರುತ್ತಾರೆ, ಆದರೆ ಯಾವುದೋ ಕಾರಣಕ್ಕೆ ಖಿನ್ನತೆ ಅವರನ್ನು ಆವರಿಸಿರುತ್ತದೆ. ಆದ್ದರಿಂದ ಖಿನ್ನತೆಯನ್ನುನ ನಿರ್ಲಕ್ಷ್ಯ ಮಾಡಲೇಬಾರದು.


 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries