HEALTH TIPS

ಸಂಸದ ಸ್ಥಾನಕ್ಕೆ ರಾಹುಲ್ ಅನರ್ಹ: ಖಂಡಿಸಿ ಪ್ರತಿಭಟನೆಗೆ ಕರೆ: ಕಾಂಗ್ರೆಸ್ ಮುಖಂಡ ರಿಜಿಲ್ ಮಾಕುಟ್ಟಿ ವಿರುದ್ಧ ಪ್ರಕರಣ


              ಕಣ್ಣೂರು: ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದನ್ನು ವಿರೋಧಿಸಿ ಫೇಸ್ ಬುಕ್ ಮೂಲಕ ಪ್ರತಿಭಟನೆಗೆ ಕರೆ ನೀಡಿದ ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ ದಾಖಲಾಗಿದೆ.
             ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ರಿಜಿಲ್ ಮಾಕುಟ್ಟಿ ವಿರುದ್ಧ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಪಿ. ರಾಜನ್ ಅವರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
             ಎಫ್‍ಐಆರ್‍ನಲ್ಲಿ ರಿಜಿಲ್ ಮಾಕುಟ್ಟಿ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ರಾಹುಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ರಿಜಿಲ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
                "ಇದೊಂದು ಅಂತಿಮ ಯುದ್ಧ. ಪ್ರತಿಕ್ರಿಯಿಸಿ ಇಲ್ಲವೇ ಮಡಿಯಿರಿ. ನಾಯಕತ್ವ ಭಾರತ್ ಬಂದ್ ಘೋಷಸÀಬೇಕು. ದೇಶದ ಬೀದಿಗಳು ಕಲುಷಿತವಾಗಲಿ, ಮೋದಿ ಕಳೆಯಲಿ” ಎಂದು ರಿಜಿಲ್ ಮಾಕ್ಕುಟ್ಟಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಪೋಸ್ಟ್ ವೈರಲ್ ಆದ ನಂತರ ದೂರುಗಳು ಬಂದಿದ್ದು, ಪ್ರಕರಣ ದಾಖಲಿಸಲಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries