HEALTH TIPS

ಲೈಫ್ ಮಿಷನ್ ಕಪ್ಪು ಹಣದ ವಹಿವಾಟಿನ ಮೂಲಕ ಆರೋಪಿಗಳಿಂದ ಪ್ರಾಯೋಜಿತ ಭಯೋತ್ಪಾದನೆಯ ಯತ್ನ; ಶಿವಶಂಕರ್ ಪ್ರಮುಖ ಸೂತ್ರಧಾರ: ಇ.ಡಿ. ಹೇಳಿಕೆ


                ಕೊಚ್ಚಿ: ಲೈಫ್ ಮಿಷನ್ ಪ್ರಕರಣದ ಕಪ್ಪುಹಣ ವ್ಯವಹಾರದ ಮುಖ್ಯ ಸೂತ್ರಧಾರ ಮುಖ್ಯಮಂತ್ರಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಸ್ವಪ್ನಾ ಅವರ ಲಾಕರ್‍ನಿಂದ ಪತ್ತೆಯಾದ ಹಣ ಶಿವಶಂಕರ್‍ಗೆ ಸೇರಿದ್ದು ಎಂದು ಇಡಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಶಿವಶಂಕರ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ.
              ಲೈಫ್ ಮಿಷನ್ ಪ್ರಕರಣದಲ್ಲಿ ಆರೋಪಿಗಳು ಕಪ್ಪುಹಣದ ವಹಿವಾಟಿನ ಮೂಲಕ ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡಲು ಯತ್ನಿಸಿದ್ದರು. ಶಿವಶಂಕರ್ ಅವರು ವಹಿವಾಟಿನ ಕೇಂದ್ರ ಬಿಂದು. ಲಾಕರ್ ನಲ್ಲಿ ಪತ್ತೆಯಾದ ಹಣ ಶಿವಶಂಕರ್ ಅವರದ್ದು ಎಂದು ಚಾರ್ಟರ್ಡ್ ಅಕೌಂಟೆಂಟ್ ವೇಣುಗೋಪಾಲ್ ಮತ್ತು ಸ್ವಪ್ನಾ ಸುರೇಶ್ ಹೇಳಿಕೆ ನೀಡಿದ್ದಾರೆ.
          ಕಪ್ಪುಹಣ ವ್ಯವಹಾರಕ್ಕೆ ಸಂಬಂಧಿಸಿದ ಇನ್ನಷ್ಟು ದಾಖಲೆಗಳನ್ನು ವಶಪಡಿಸಿಕೊಳ್ಳಬೇಕಿದೆ. ಹಾಗಾಗಿ ಶಿವಶಂಕರ್ ಗೆ ಜಾಮೀನು ನೀಡಬೇಡಿ. ಇದಕ್ಕೂ ಮುನ್ನ ಬಂಧನಕ್ಕೊಳಗಾಗಿದ್ದಾಗಲೂ ಶಿವಶಂಕರ್ ಆರೋಗ್ಯ ಸಮಸ್ಯೆಯ ಕಾರಣ ನೀಡಿ ಜಾಮೀನು ಪಡೆದಿದ್ದರು. ಆದರೆ ಬಳಿಕ ಶೀಘ್ರದಲ್ಲೇ ಅವರು ಕೆಲಸಕ್ಕೆ ಸೇರಿಕೊಂಡರು. ಹಾಗಾಗಿ, ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕು ಎಂಬ ವಾದ ಸಾಧುವಾದುದಲ್ಲ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.
            ಆದರೆ ಸ್ವಪ್ನಾ ಅವರ ಲಾಕರ್‍ನಲ್ಲಿ ಪತ್ತೆಯಾದ ಹಣಕ್ಕೆ ಸಂಬಂಧಿಸಿದಂತೆ ಇಡಿ ಶಿವಶಂಕರ್ ಅವರನ್ನು ಈ ಹಿಂದೆ ಬಂಧಿಸಿದೆಯೇ ಮತ್ತು ಅದೇ ಲಾಕರ್‍ಗೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣವನ್ನು ಹೇಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ನ್ಯಾಯಾಲಯ ಕೇಳಿದೆ. ಚಿನ್ನ ಕಳ್ಳಸಾಗಣೆಯಲ್ಲಿನ ಹಣದ ವಹಿವಾಟಿನ ಬಗ್ಗೆ ತನಿಖೆ ನಡೆಸಿದಾಗ ಲೈಫ್ ಮಿಷನ್ ಹಗರಣದ ಬಗ್ಗೆ ಮನವರಿಕೆಯಾಗಿದೆ ಎಂದು ತನಿಖಾ ತಂಡ ನ್ಯಾಯಾಲಯಕ್ಕೆ ತಿಳಿಸಿದೆ. ಪ್ರಕರಣದ ವಾದ ನಾಳೆ ಮುಂದುವರಿಯಲಿದೆ.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries