HEALTH TIPS

ಸರ್ಕಾರಿ ವಾರ್ಷಿಕೋತ್ಸವ ಆಚರಣೆ: ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಅಣಕ: ಕೆ.ಸುರೇಂದ್ರನ್


                   ತಿರುವನಂತಪುರ: ಬೆಲೆಯೇರಿಕೆಯಿಂದ ರಾಜ್ಯದ ಜನತೆ ಸಂಕಷ್ಟದಲ್ಲಿರುವಾಗ ಸರ್ಕಾರದ ವಾರ್ಷಿಕ ಆಚರಣೆ ಜನರನ್ನು ಅಣಕಿಸಿದಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.
        ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಇಂಧನ ಬೆಲೆಯಲ್ಲಿ 15 ರೂಪಾಯಿ ವ್ಯತ್ಯಾಸವಾಗಿದೆ. ಇಂಧನ ತೆರಿಗೆ ಹೆಚ್ಚಳ ಜಾರಿಗೆ ಬಂದಿದ್ದು, ರಾಜ್ಯವು ವಾಸಕ್ಕೆ ಯೋಗ್ಯವಾಗಿಲ್ಲ.
         ಶ್ರೀಲಂಕಾ, ಪಾಕಿಸ್ತಾನದ ಪರಿಸ್ಥಿತಿಗೆ ಕೇರಳವೂ ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಜನ ಜೀವನ ದುಸ್ತರವಾಗಲಿದೆ. ಇಂತಹ ಸಂದರ್ಭ ಸರ್ಕಾರ ಸಾರ್ವಜನಿಕ ಖಜಾನೆಯಿಂದ 50 ಕೋಟಿ ರೂ.ಗಳನ್ನು ತೆಗೆದುಕೊಂಡು ವಾರ್ಷಿಕ ಆಚರಣೆ ನಡೆಸುತ್ತದೆ. ಪಿಣರಾಯಿ ವಿಜಯನ್ ಸರ್ಕಾರದ ವμರ್Áಚರಣೆ ಕೇರಳೀಯರ ಪಾಲಿಗೆ ಅವರು ಮರೆಯಲು ಬಯಸುವ ದುರಂತ ದಿನವಾಗಿದೆ. ಸರ್ಕಾರದ ಸಾಧನೆಗಳನ್ನು ಬಿಂಬಿಸಲು ಜಿಲ್ಲಾ ಮಟ್ಟದ ವಸ್ತು ಪ್ರದರ್ಶನಕ್ಕೆ ಮಾತ್ರ ಸುಮಾರು ನಾಲ್ಕೂವರೆ ಕೋಟಿ ಖರ್ಚು ಮಾಡಲಾಗಿದೆ. ಭ್ರμÁ್ಟಚಾರ, ಸ್ವಜನಪಕ್ಷಪಾತ, ಆರ್ಥಿಕ ಕುಸಿತವಲ್ಲದೆ ಈ ಸರ್ಕಾರಕ್ಕೆ ಹೇಳಿಕೊಳ್ಳುವ ಸಾಧನೆ ಏನು ಎಂದು ಕೆ.ಸುರೇಂದ್ರನ್ ಪ್ರಶ್ನಿಸಿದರು.
          ಜನರ ಮೇಲೆ ಭಾರಿ ತೆರಿಗೆ ಹೊರೆ ಹೇರುತ್ತಿರುವ ದೊಡ್ಡ ಉದ್ಯಮಿಗಳಿಂದ ತೆರಿಗೆ ವಸೂಲಿ ಮಾಡಲು ಪಿಣರಾಯಿ ವಿಜಯನ್ ಪ್ರಯತ್ನಿಸುತ್ತಿಲ್ಲ. ಸರಕಾರದ ನಿರ್ಲಕ್ಷ್ಯದಿಂದ ಕೋಟ್ಯಂತರ ರೂಪಾಯಿ ತೆರಿಗೆ ಬೊಕ್ಕಸಕ್ಕೆ ಸೇರುತ್ತಿಲ್ಲ. ಸರ್ಕಾರ ಎಲ್ಲಾ ಕಲ್ಯಾಣ ಚಟುವಟಿಕೆಗಳನ್ನು ನಿಲ್ಲಿಸಿದೆ. ಸಾಲ ಮಾಡಿ ಸಂಬಳ, ಪಿಂಚಣಿ ಕೊಡುವುದಕ್ಕಿಂತ ಕೇರಳದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಲು ವಿತ್ತ ಸಚಿವರು ಸಿದ್ಧರಾಗಿರಬೇಕು. ಕೆಎಸ್ ಆರ್ ಟಿಸಿ ವೇತನ ನೀಡದಿರುವುದನ್ನು ವಿರೋಧಿಸಿ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸಿದ ನೌಕರನನ್ನು ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮ ಆಕ್ಷೇಪಾರ್ಹ. ಕೆ.ಸುರೇಂದ್ರನ್ ಮಾತನಾಡಿ, ಸಂಬಳ ಕೇಳುವಾಗ ಸೇಡು ತೀರಿಸಿಕೊಳ್ಳುವುದು ಪ್ರಜಾಪ್ರಭುತ್ವ ವಿರೋಧಿ ಎಂದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries