ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿ ಮಾತೃಸಂಗಮದ ವತಿಯಿಂದ ಆಸಕ್ತ ವಿದ್ಯಾರ್ಥಿಗಳು ಮತ್ತು ಹಿರಿಯರಿಗೆ ಒಂದು ವಾರದ ಕಸೂತಿ ತರಬೇತಿ ಆರಂಭಿಸಲಾಗಿದೆ.ಹಿರಿಯ ಶಿಕ್ಷಕ ವೆಂಕಟ ವಿದ್ಯಾಸಾಗರ ದೀಪ ಬೆಳಗಿಸಿ ತರಬೇತಿ ಉದ್ಘಾಟಿಸಿದರು.ಮಾತೃ ಸಂಘದ ಅಧ್ಯಕ್ಷೆ ದಿವ್ಯ ಶಿರಂತಡ್ಕ ಶುಭ ಹಾರೈಸಿದರು.ಶಿಕ್ಷಕಿ ಗೀತಾಂಜಲಿ ಕಾರ್ರ್ಯಕ್ರಮ ನಿರೂಪಿಸಿದರು.ದುರ್ಗಾದೇವಿ ಸ್ವರ್ಗ ಇವರು ಸಂಪನ್ಮೂಲ ವ್ಯಕ್ತಿಯಾಗಿ ತರಗತಿ ನೀಡಿದರು.