HEALTH TIPS

ಕಣ್ಣೂರಿನಲ್ಲಿ ಒಂದೇ ಕುಟುಂಬದ ಐದು ಮಂದಿ ಸಾವಿಗೀಡಾದ ಸಥಿತಿಯಲ್ಲಿ ಪತ್ತೆ: ಮೂವರು ಮಕ್ಕಳ ಕೊಂದು ನೇಣಿಗೆ ಕೊರಳೊಡ್ಡಿದ ದಂಪತಿ

 



          ಕಣ್ಣೂರು: ಚರುಪುಳದಲ್ಲಿ ಒಂದೇ ಕುಟುಂಬದ ಐದು ಮಂದಿ ಮನೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಣ್ಣೂರು ಚೆರುಪುಳ ನಿವಾಸಿ ಶಾಜಿ(42) ಪತ್ನಿ ಶ್ರೀಜಾ(38) ಮಕ್ಕಳಾದ ಸೂರಜ್(12), ಸುಬಿನ್(8) ಹಾಗೂ ಸುರಭಿ(6)ಸಾವಿಗೀಡಾದವರು.

           ಬುಧವಾರ ಬೆಳಗ್ಗೆ ಐದೂ ಮಂದಿಯ ಮೃತದೆಹ ಮನೆಯೊಳಗೆ ಪತ್ತೆಯಾಗಿದೆ. ಮೂವರು ಮಕ್ಕಳನ್ನು ನೇಣಿಗೇರಿಸಿ ಕೊಲೆಗೈದ ಬಳಿಕ, ಒಂದೇ ಹಗ್ಗದ ಎರಡು ಕುಣಿಕೆಗೆ ಕೊರಳೊಡ್ಡಿ ದಂಪತಿ ಆತ್ಮಹತ್ಯೆಗೈದಿದ್ದಾರೆ.

              ಇಬ್ಬರೂ ಈ ಹಿಂದೆ ಬೇರೆ ವಿವಾಹಿತರಾಗಿದ್ದು, ಶಾಜಿಗೆ ಪತ್ನಿ, ಇಬ್ಬರು ಮಕ್ಕಳು ಹಾಗೂ ಶ್ರೀಜಾ ಪತಿ ಹಾಗೂ ಮೂವರು ಮಕ್ಕಳನ್ನು ಹೊಂದಿದ್ದಾಳೆ. ಶ್ರಿಜಾ ತನ್ನ ಮೂವರು ಮಕ್ಕಳೊಂದಿಗೆ ಪರಾರಿಯಾಗಿ, ಮೆ 16ರಂದು ಸಜಿಯನ್ನು ವಿವಾಹಿತಳಾಗಿದ್ದಾಳೆ. ಮೃತಪಟ್ಟವರಲ್ಲಿ ಶ್ರೀಜಳ ಮೂವರು ಮಕ್ಕಳು  ಒಳಗೊಂಡಿದ್ದಾರೆ. ಇವರಿಬ್ಬರೂ ಪ್ರಿತಿಸಿ ವಿವಾಹಿತರಾಗಿದ್ದಕ, ಇತ್ತಿಚಿನ ದಿನಗಳಲ್ಲಿ ಪರಸ್ಪರ ಜಗಳವಾಡುತ್ತಿದ್ದರೆನ್ನಲಾಗಿದೆ.  ಬುಧವರ ಬಹಳ ಹೊತ್ತಿನ ವರೆಗು ಮನೆಯಿಂದ ಯರೂ ಹೊರಬಾರದಿರುವುದರಿಮದ ಸಮಶಯಗೊಮಡ ನೆರೆಮನೆಯವರು ಮನೆಕಡೆ ತೆರಳಿದಾಗ ಮೃತದೇಹ ಪತ್ತೆಯಾಗಿದೆ. ಮೃತದೇಹ ಉನ್ನತ ವ್ಯದ್ಯಕೀಯ ತಪಾಸಣೆಗಾಗಿ ಪರಿಯಾರಮ ವೈದ್ಯಕೀಯ ಕಾಲೇಜುಅಸ್ಪತ್ರೆಗೆ ರವಾನಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries