ಕಾಸರಗೋಡು: ಪುತ್ತಿಗೆ ಪಂಚಾಯಿತಿ ವ್ಯಾಪ್ತಿಯ ಚಕ್ಕಣಿಕೆ ಪ್ರದೇಶದಲ್ಲಿ ಕಾಡುಕೋಣ ಕಂಡುಬಂದಿದ್ದು, ಇಲ್ಲಿನ ಜನತೆ ಆತಂಕಕ್ಕೀಡಾಗಿದ್ದಾರೆ. ಇಲ್ಲಿನ ನಿವಾಸಿ ಬಾಲಸುಬ್ರಹ್ಮಣ್ಯ ಭಟ್ ಅವರ ಅಂಗಳಕ್ಕೆ ಕಾಡುಕೋಣ ತಲುಪಿದೆ. ಎರಡು ದಿವಸಗಳ ಹಿಂದೆ ಇದು ಊಜಂಪದವು ಪ್ರದೇಶದಲ್ಲೂ ಕಂಡುಬಂದಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.