HEALTH TIPS

ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯ ರಾಜ್ಯ ಸಮ್ಮೇಳನ ಮುಕ್ತಾಯ

               ಕೊಟ್ಟಾರಕ್ಕರ: ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯು 57ನೇ ರಾಜ್ಯ ಸಮ್ಮೇಳನ ನಿನ್ನೆ ಮುಕ್ತಾಯಗೊಂಡಿತು.  ದೇವಸ್ಥಾನದ ಆಡಳಿತವನ್ನು ಭಕ್ತರಿಗೆ ಹಸ್ತಾಂತರಿಸುವುದು, ಕೇರಳದ ಪ್ರಕೃತಿ ಮತ್ತು ಸಾಂಸ್ಕøತಿಕ ಪರಂಪರೆಯ ಸಂರಕ್ಷಣೆಗಾಗಿ ದೇವಾಲಯಗಳ ಅಭಯಾರಣ್ಯಗಳನ್ನು ಕೇಂದ್ರವಾಗಿಟ್ಟುಕೊಂಡು ಅನುಷ್ಠಾನಗೊಳಿಸಬೇಕಾದ ಯೋಜನೆಗಳು, ದೇವಾಲಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸನಾತನ ಧರ್ಮ ಶಾಲೆಗಳನ್ನು ಪ್ರಾರಂಭಿಸುವುದು ಮುಂತಾದ ವಿಷಯಗಳನ್ನು ರಾಜ್ಯ ಸಮ್ಮೇಳನದಲ್ಲಿ ಚರ್ಚಿಸಲಾಯಿತು.

            ನಿನ್ನೆ ಬೆಳಗ್ಗೆ ನಡೆದ ಪ್ರತಿನಿಧಿ ಸಭೆ ಆರ್‍ಎಸ್‍ಎಸ್ ಪ್ರಾಂತ ಸಂಘಚಾಲಕ್  ಕೆ.ಕೆ. ಬಲರಾಮ್ ಉದ್ಘಾಟಿಸಿದರು. ಮುಂಬರುವ ಯುಗದ ಮಹತ್ವವು ಅಧಿಕಾರದಲ್ಲಿ ಅಥವಾ ಬುದ್ಧಿವಂತಿಕೆಯಲ್ಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಕಾಲಕ್ಕೆ ತಕ್ಕಂತೆ ಮುನ್ನಡೆಯುವವರು ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

          ಕ್ಷೇತ್ರ ಸಂರಕ್ಷಣಾ ಸಮಿತಿ ರೂಪಿಸಿರುವ ಹೊಸ ಹಂತದ ಕಾರ್ಯಚಟುವಟಿಕೆಗಳನ್ನು ದೇವಸ್ಥಾನಗಳಲ್ಲಿ ಕೇಂದ್ರೀಯವಾಗಿ ಜಾರಿಗೊಳಿಸಬೇಕು. ದೇವಾಲಯದ ಆಡಳಿತಗಳು ಭ್ರμÁ್ಟಚಾರಕ್ಕೆ ಸಮಾನಾರ್ಥಕವಾಗುತ್ತಿವೆ. ದೇವಸ್ಥಾನಗಳಲ್ಲಿ ರಾಜಕೀಯ ಮುಕ್ತ ಆಡಳಿತ ವ್ಯವಸ್ಥೆ ಜಾರಿಯಾಗಬೇಕು ಎಂದು ತಿಳಿಸಿದರು.

           ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಎಂ. ಮೋಹನ್ ಮಾತನಾಡಿದರು. ಸನಾತನಧರ್ಮ ಪಾಠಶಾಲೆಯ ಪರಿಷ್ಕೃತ ಪುಸ್ತಕ ಆವೃತ್ತಿಯ ಬಿಡುಗಡೆ ಕೆ.ಕೆ. ಬಲರಾಮ್ ನಿರ್ವಹಿಸಿದರು. ಕ್ಷೇತ್ರ ಸಂರಕ್ಷಣಾ ಸಮಿತಿ ರಾಜ್ಯ ಕಾರ್ಯದರ್ಶಿ ವಿ.ಕೆ. ಚಂದ್ರನ್, ಮಾತೃ ಸಮಿತಿ ರಾಜ್ಯಾಧ್ಯಕ್ಷೆ ಕುಸುಮಮ್ ರಾಮಚಂದ್ರನ್, ಎಂ. ವಿಪಿನ್ ಮತ್ತಿತರರು ಭಾಗವಹಿಸಿದ್ದರು. ಭಕ್ತರಿಗೆ ದೇವಸ್ಥಾನದ ಆಡಳಿತ ಮತ್ತು ದೇವಸ್ಥಾನದ ಭೂಮಿ ಪರಭಾರೆ ವಿಷಯಗಳ ಕುರಿತು ನಿರ್ಣಯಗಳನ್ನು ಮಂಡಿಸಲಾಯಿತು.

             ಪ್ರಧಾನ ಕಾರ್ಯದರ್ಶಿ ಕೆ.ಎಸ್. ನಾರಾಯಣನ್ ಚಟುವಟಿಕೆ ವರದಿ ಮಂಡಿಸಿದರು. ಆರ್‍ಎಸ್‍ಎಸ್ ಕ್ಷೇತ್ರೀಯ ಸಹಕಾರ್ಯವಾಹ ಎಂ.ರಾಧಾಕೃಷ್ಣನ್ 2023-24ನೇ ಸಾಲಿನ ಕಾರ್ಯಕಾರಿ ಸಮಿತಿ ರಚನೆ ಮತ್ತು ಉಪನ್ಯಾಸ ಉದ್ಘಾಟಿಸಿದರು.

                   ಹಿಂದೂ ಸಮಾಜದ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸ್ಥಿತಿಗತಿಗಳನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದರು. ಸಾಮಾಜಿಕ ಕ್ಷೇತ್ರಗಳಲ್ಲಿ ಹಿಂದೂ ಬೆಳಕು ಮೂಡಬೇಕು. ದೇವಸ್ಥಾನಗಳ ರಕ್ಷಣೆಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ತಿಳಿಸಿದರು. ಎಂ. ಮೋಹನ್ ಅಧ್ಯಕ್ಷತೆ ವಹಿಸಿದ್ದರು.

          ಕೊಟ್ಟಾರಕ್ಕರ ಸೌಪರ್ಣಿಕಾ ಆಡಿಟೋರಿಯಂನಲ್ಲಿ ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ತಾಯಂದಿರು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

                   ರಾಜ್ಯದ ಹೊಸ ಪದಾಧಿಕಾರಿಗಳು:

          ಪಾಲಕ್ಕಲ್ ಮಾಧವ್ ಮೆನನ್, ಪಿಇಬಿ ಮೆನನ್, ಡಾ.ಬಾಲಕೃಷ್ಣ ವಾರಿಯರ್, ಸ್ವಾಮಿ ಅಯ್ಯಪ್ಪದಾಸ್, ಡಾ. ಕರುಮತ್ರ ವಿಜಯನ್ ತಂತ್ರಿ, ಎ.ಕೆ.ಬಿ. ನಾಯರ್, ಎನ್.ಎಂ. ಕದಂಬನ್ ನಂಬೂದಿರಿಪಾಡ್, ಡಾ. ಶ್ರೀಕೃಷ್ಣ ವಾರಿಯರ್, ಡಾ.ಕೆ. ಅರವಿಂದಾಕ್ಷನ್, ಡಾ. ವಿಜಯರಾಘವನ್, ಎನ್.ವಿ.ವಿ. ನಂಬೂದಿರಿ (ಪೋಷಕರು), ಎಂ. ಮೋಹನನ್ (ಅಧ್ಯಕ್ಷರು), ಕೆ. ನಾರಾಯಣನ್‍ಕುಟ್ಟಿ, ಮುಲ್ಲಪಳ್ಳಿ ಕೃಷ್ಣನಂಬೂದಿರಿ, ಎಂ.ವಿ. ರವಿ (ಉಪಾಧ್ಯಕ್ಷರು), ಕೆ.ಎಸ್. ನಾರಾಯಣನ್ (ಪ್ರಧಾನ ಕಾರ್ಯದರ್ಶಿ), ವಿ.ಕೆ. ಚಂದ್ರನ್, ಜಯಪುನಾಲೂರ್, ಎಂ. ವಿಪಿನ್ (ಕಾರ್ಯದರ್ಶಿಗಳು), ವಿ.ಎಸ್. ರಾಮಸ್ವಾಮಿ (ಖಜಾಂಜಿ), ಟಿ.ಯು. ಮೋಹನನ್ (ಸಂಘಟನಾ ಕಾರ್ಯದರ್ಶಿ)



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries