ತಿರುವನಂತಪುರಂ: ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ಸಾಧ್ಯವಾಗದ ಅಧಿಕಾರಿಗಳು ರಾಜೀನಾಮೆ ನೀಡುವಂತೆ ಹೈಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಈ ಕಟು ಟೀಕೆ ವ್ಯಕ್ತಪಡಿಸಿರುವರು. ರಸ್ತೆ ಬದಿಯಲ್ಲಿರುವ ಅಕ್ರಮ ಬ್ಯಾನರ್ ಹಾಗೂ ಫ್ಲಕ್ಸ್ ಬೋರ್ಡ್ ಗಳನ್ನು ತೆರವು ಮಾಡುವಂತೆ ನ್ಯಾಯಾಲಯ ಹಲವು ಬಾರಿ ಸೂಚಿಸಿತ್ತು. ಸರ್ಕಾರ ಈ ಸೂಚನೆಯನ್ನು ಸರ್ವತಾ ಪಾಲಿಸಿಲ್ಲ ಎಂದು ನ್ಯಾಯಾಲಯ ಟೀಕಿಸಿದೆ.
ಅಕ್ರಮ ಫ್ಲಕ್ಸ್ ಬೋರ್ಡ್ ಇತ್ಯಾದಿಗಳನ್ನು ತೆಗೆದುಹಾಕಲು ರಚಿಸಲಾದ ಸಮಿತಿಯು ನ್ಯಾಯಾಲಯದ ಆದೇಶದಂತೆ ಕಾರ್ಯನಿರ್ವಹಿಸದಿದ್ದರೆ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಏಕ ಪೀಠ ಎಚ್ಚರಿಸಿದೆ. ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ನೆನಪಿಸಿದೆ.
ಸದ್ಯ ಅಕ್ರಮ ಫ್ಲಕ್ಸ್ ಬೋರ್ಡ್ ಗಳು ಎಲ್ಲೆಲ್ಲಿವೆ ಎಂಬುದಕ್ಕೆ ಉತ್ತರಿಸಲು ಕಾಲಾವಕಾಶ ನೀಡುವಂತೆ ಸರ್ಕಾರಿ ವಕೀಲರು ಕೋರಿದರು. ಇದರ ಬೆನ್ನಲ್ಲೇ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಜೂನ್ಗೆ ಮುಂದೂಡಿದೆ.