HEALTH TIPS

ಒಂದು ಸಣ್ಣ ತಪ್ಪಿನಿಂದ ಪ್ರಾಣವನ್ನೇ ಕಳ್ಕೊಂಡ ವಿದ್ಯಾರ್ಥಿನಿ: ಚಿಕ್ಕ ಸುಳಿವು ಸಿಕ್ಕಿದ್ದರೂ ಉಳಿಯುತ್ತಿತ್ತು ಜೀವ

               ಲಪ್ಪುಳ: ವಿಷಕಾರಿ ಹಣ್ಣನ್ನು ತಿಂದ ಬಳಿಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹುಡುಗಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ದುರಂತ ಸಾವಿಗೀಡಾಗಿರುವ ಘಟನೆ ಕೇರಳ ಆಲಪ್ಪುಳದಲ್ಲಿ ನಡೆದಿದೆ.

                ವೀಣಾ (14) ಮೃತ ಬಾಲಕಿ. ಈಕೆ ಆಲಪ್ಪುಳದ ಕನ್ನಂಚೇರಿಯ ಕರುವಟ್ಟ ಮೂಲದವಳು.

9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಮೊದಲು ಹರಿಪ್ಪಾದ್​ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಆಕೆ ವಿಷಕಾರಿ ಹಣ್ಣನ್ನು ತಿಂದಿರುವ ಬಗ್ಗೆ ಯಾವುದೇ ಸುಳಿವನ್ನು ನೀಡಲಿಲ್ಲ.

                   ಹಣ್ಣು ತಿಂದಿದ್ದರ ಬಗ್ಗೆ ಹೇಳಿದ್ದರೆ ಸೂಕ್ತ ಚಿಕಿತ್ಸೆಯನ್ನು ನೀಡಿ ಹುಡುಗಿ ಉಳಿಸಬಹುದಾಗಿತ್ತು. ಆದರೆ, ವೀಣಾ ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಆಕೆ ಸಾಮಾನ್ಯ ಚಿಕಿತ್ಸೆ ನೀಡಿ ವಾಪಸ್​ ಕಳುಹಿಸಲಾಯಿತು.

                 ಇದಾದ ಮಾರನೇ ದಿನ ವೀಣಾಳ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಮತ್ತೆ ಆಕೆಯನ್ನು ವಂದಾನಂ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ವೀಣಾ ತಾನು ವಿಷಯುಕ್ತ ಹಣ್ಣನ್ನು ಸೇವಿಸಿದ್ದಾಗಿ ಬಹಿರಂಗಪಡಿಸಿದ್ದಾಳೆ. ಆದರೆ, ಅಷ್ಟರಲ್ಲಾಗಲೇ ತಡವಾಗಿತ್ತು. ಚಿಕಿತ್ಸೆ ನೀಡಿದರೂ ವೀಣಾ ಬದುಕುಳಿಯಲಿಲ್ಲ.

                 ವೈದ್ಯರ ಬಳಿ ಏನನ್ನು ಮುಚ್ಚಿಡಬಾರದು ಎಂದು ಹೇಳುವುದು ಇದೇ ಕಾರಣಕ್ಕೆ. ವೀಣಾ ಮೊದಲೇ ತಾನು ವಿಷಯುಕ್ತ ಹಣ್ಣನ್ನು ಸೇವಿಸಿದ್ದೇನೆ ಎಂದು ಹೇಳಿದ್ದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆತು ಆಕೆಯ ಪ್ರಾಣ ಉಳಿಯುತ್ತಿತ್ತು. ಆದರೆ, ಆಕೆ ಮಾಡಿದ ಒಂದು ಸಣ್ಣ ಪ್ರಮಾದ ಇದೀಗ ಆಕೆಯ ಪ್ರಾಣವನ್ನು ಕಸಿದುಕೊಂಡಿದೆ. ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries