HEALTH TIPS

ಸೆಪ್ಟೆಂಬರ್‌ನಿಂದ ತರಕಾರಿ ಬೆಲೆ ಇಳಿಕೆ ಸಾಧ್ಯತೆ: ಆರ್‌ಬಿಐ ಗವರ್ನರ್‌

                 ವದೆಹಲಿ: ಭಾರತದಲ್ಲಿ ಗಗನಕ್ಕೇರಿರುವ ತರಕಾರಿ ಬೆಲೆ ಸೆಪ್ಟೆಂಬರ್‌ನಿಂದ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ತಿಳಿಸಿದ್ದಾರೆ.

               ತರಕಾರಿ ಮತ್ತು ಸಿರಿಧಾನ್ಯಗಳ ಬೆಲೆ ಜುಲೈನಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇ 7.44ಕ್ಕೆ ಹೆಚ್ಚಿಸಿವೆ, ಇದು 15 ತಿಂಗಳಲ್ಲೇ ಅತ್ಯಧಿಕವಾಗಿದೆ. ಸೆಪ್ಟೆಂಬರ್‌ನಿಂದ ತರಕಾರಿ ಹಣದುಬ್ಬರದಲ್ಲಿ ಗಮನಾರ್ಹವಾದ ಇಳಿಕೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ. 

                 ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಆಹಾರದ ಬೆಲೆಗಳಿಗೆ ಅಡ್ಡಿಯಾಗಬಹುದಾದರೂ ಧಾನ್ಯಗಳಿಗೆ ಉತ್ತಮ ಬೆಲೆ ಬರುವ ಲಕ್ಷಣವಿದೆ ಎಂದು ಅವರು ಹೇಳಿದರು.

                ಬೆಲೆ ಸ್ಥಿರತೆಯು ಸುಸ್ಥಿರ ಬೆಳವಣಿಗೆಗೆ ಆಧಾರವಾಗಿರಬೇಕು. ಬೆಳವಣಿಗೆಯನ್ನು ಮುಂದುವರೆಸಲು ಮತ್ತು 2023-24 ರಲ್ಲಿ ಬಂಡವಾಳ ವೆಚ್ಚವು ವೇಗವನ್ನು ಪಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿದೆ ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries