ನವದೆಹಲಿ: ಅಕ್ಟೋಬರ್ ತಿಂಗಳು ಕಳೆಯುತ್ತಿದ್ದಂತೆ ವಾತಾವರಣದಲ್ಲೂ ಬದಲಾವಣೆ ಕಂಡುಬರುತ್ತಿದೆ. ಕಳೆದ ವಾರ ಗುಡ್ಡಗಾಡು ಪ್ರದೇಶಗಳಲ್ಲಿ ಹಿಮಪಾತ ಮತ್ತು ಬಯಲು ಸೀಮೆಯಲ್ಲಿ ಮಳೆಯ ನಂತರ, ಬೆಳಗ್ಗೆ ಮತ್ತು ಸಂಜೆ ಸೌಮ್ಯವಾದ ಚಳಿ ಮುಂದುವರಿಯುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ತಾಪಮಾನದಲ್ಲಿ ನಿರಂತರ ಕುಸಿತ ದಾಖಲಾಗುತ್ತಿದೆ.
ಆದರೆ, ಕೆಲವು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೇರಳ ಮತ್ತು ತಮಿಳುನಾಡಿನಲ್ಲಿ ಮಳೆ ಎಚ್ಚರಿಕೆ
ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಎರಡು ದಿನಗಳಲ್ಲಿ ಕೇರಳ ಮತ್ತು ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿಯ ಹವಾಮಾನ ಹೇಗಿರುತ್ತದೆ?
ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಎನ್ಸಿಆರ್ನಲ್ಲಿ ಸಹ ಚಳಿ ಕಂಡುಬರುತ್ತಿದೆ. ಭಾನುವಾರದ ಮುಂಜಾನೆ ಅತ್ಯಂತ ಚಳಿ ಕಂಡುಬಂದಿದೆ. ಶನಿವಾರಕ್ಕೆ ಹೋಲಿಸಿದರೆ ಭಾನುವಾರ ರಾಜಧಾನಿ ದೆಹಲಿಯ ತಾಪಮಾನದಲ್ಲಿ ಇಳಿಕೆಯಾಗಿದೆ. ಏತನ್ಮಧ್ಯೆ, ದೆಹಲಿಯಲ್ಲಿ ಸೋಮವಾರ ಮೋಡ ಕವಿದ ವಾತಾವರಣ ಇರಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ, ಆದರೆ ಹಗಲಿನಲ್ಲಿ ಆಕಾಶವು ಸ್ವಚ್ಛವಾಗಿರುತ್ತದೆ. ಇಂದು ಗರಿಷ್ಠ ತಾಪಮಾನ 31 ಮತ್ತು ಕನಿಷ್ಠ 17 ಡಿಗ್ರಿ ಇರಲಿದೆ.
ಹಿಮಾಚಲದಲ್ಲಿ ಬದಲಾಗಿದೆ ಹವಾಮಾನದ ಸ್ವರೂಪ
ಉತ್ತರಾಖಂಡದಲ್ಲಿ ಹಿಮಪಾತದ ಬಗ್ಗೆ ಐಎಂಡಿ ಎಚ್ಚರಿಕೆ ನೀಡಿದೆ. ಉತ್ತರಾಖಂಡದ ಎತ್ತರದ ಪ್ರದೇಶಗಳಲ್ಲಿ ಲಘು ಮಳೆ ಮತ್ತು ಹಿಮಪಾತವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಪರ್ವತ ಪ್ರದೇಶಗಳಲ್ಲಿ ಮಳೆ ಹಾಗೂ ಹಿಮಪಾತ ಆಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದಲ್ಲದೇ ಇಂದು ಹಿಮಾಚಲದ ಕೆಲವು ಪ್ರದೇಶಗಳಲ್ಲಿ ಹಿಮಪಾತದ ಸಾಧ್ಯತೆಗಳಿವೆ.
ಉತ್ತರಪ್ರದೇಶದಲ್ಲಿ ಹವಾಮಾನ ಹೇಗಿರುತ್ತದೆ?
ಉತ್ತರಪ್ರದೇಶದಲ್ಲೂ ಚಳಿ ಹೆಚ್ಚಿದೆ. ಬೆಳಗ್ಗೆ ಮತ್ತು ಸಂಜೆಯ ವೇಳೆ ಚಳಿಯ ಅನುಭವವಾಗುತ್ತಿದೆ. ಆದರೆ, ಕೆಲವೆಡೆ ಮುಂಜಾನೆ ಮಂಜು ಕವಿದಿದೆ. ಹವಾಮಾನ ಇಲಾಖೆ ಪ್ರಕಾರ, ಮುಂದಿನ ದಿನಗಳಲ್ಲಿ ಇದೇ ಪ್ರವೃತ್ತಿ ಮುಂದುವರಿಯುತ್ತದೆ. ಇದಲ್ಲದೇ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.