HEALTH TIPS

ಕಬ್ಬು, ಭತ್ತದ ಹೊಟ್ಟು ಸುಡುವಿಕೆಯಿಂದ ನಿಗೂಢ ಮೂತ್ರಪಿಂಡ ಕಾಯಿಲೆ?

             ವದೆಹಲಿ: ಕಬ್ಬು ಮತ್ತು ಭತ್ತದ ಹೊಟ್ಟು ಸುಡುವುದರಿಂದ ವಿಷಕಾರಿ ವಸ್ತು ಬಿಡುಗಡೆಯಾಗುವ ಸಾಧ್ಯತೆ ಇದ್ದು, ಕೃಷಿ ಕಾರ್ವಿುಕರಲ್ಲಿ ನಿಗೂಢ ಮೂತ್ರಪಿಂಡ ಕಾಯಿಲೆಗೆ ಇದು ಕಾರಣವಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.

               ಭಾರತ, ಶ್ರೀಲಂಕಾ, ಅಮೆರಿಕ ಸಹಿತ ಹಲವು ದೇಶಗಳಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

              ವಿಶ್ವದಾದ್ಯಂತ ಕೃಷಿ ಕಾರ್ವಿುಕರಲ್ಲಿ ಮೂತ್ರಪಿಂಡ ಕಾಯಿಲೆಯ ಸಾಮಾನ್ಯವಾಗಿದೆ. ಶಾಖದ ಒತ್ತಡ ಮತ್ತು ಹವಾಮಾನ ಬದಲಾವಣೆಯು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕಬ್ಬಿನ ಸುಡುವಿಕೆಯಿಂದ ಉಂಟಾದ ಬೂದಿಯಿಂದ ಬಿಡುಗಡೆಯಾದ ಸಣ್ಣ ಸಿಲಿಕಾ ಕಣಗಳು ಮೂತ್ರಪಿಂಡಕ್ಕೆ ಹಾನಿ ಉಂಟು ಮಾಡುತ್ತದೆ.

            ಕುಡಿಯುವ ನೀರು, ಉಸಿರಾಟ ಅಥವಾ ಆಹಾರ ಮೂಲಕ ಇದು ಕಾರ್ವಿುಕರ ದೇಹಕ್ಕೆ ಸೇರ್ಪಡೆ ಆಗುತ್ತದೆ ಎಂದು ಕೊಲೊರಾಡೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೇರೆಡ್ ಬ್ರೌನ್ ಹೇಳಿದ್ದಾರೆ. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಭತ್ತ ಮತ್ತು ಕಬ್ಬಿನ ತ್ಯಾಜ್ಯಗಳಿಗೆ ಬೆಂಕಿ ಹಚ್ಚಲಾಗುತ್ತದೆ. ಇದರಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಏರಿಕೆಯಾಗುವ ಸಂಗತಿ ಸಾಮಾನ್ಯವಾಗಿದೆ. ಈ ಬೆನ್ನಲ್ಲೇ, ತಜ್ಞರ ವರದಿ ಆತಂಕ ಉಂಟು ಮಾಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries