HEALTH TIPS

ತೆಂಗು ಕೊಯ್ಲಿಗೆ ಬರುತ್ತಾರೆ ಕೊಯ್ಲು ಮಿತ್ರರು: ತೆಂಗು ಕೊಯ್ಲಿಗೆ ಕಾಲ್ ಸೆಂಟರ್ ನವೆಂಬರ್ ಮೊದಲ ವಾರದಲ್ಲಿ ಕಾರ್ಯಾರಂಭ

              ಕೊಚ್ಚಿ: ತೆಂಗು ಕೊಯ್ಲು ಇತ್ತೀಚೆಗೆ ಆಳುಗಳ ಕೊರತೆಯಿಂದ ತೀವ್ರ ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಇನ್ನು ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿಯ 'ಕೊಯ್ಲು ಮಿತ್ರರು’  ಕಾಲ್ ಸೆಂಟರ್ ಅನ್ನು ಸಂಪರ್ಕಿಸಿದರೆ, ತೆಂಗಿನಕಾಯಿ ಕೊಯ್ಲಿಗೆ ಕಾರ್ಮಿಕರು ತೋಟಗಳಿಗೆ ತಲುಪಲಿದ್ದಾರೆ. 

            ನವೆಂಬರ್ ಮೊದಲ ವಾರದಲ್ಲಿ ಕಾಲ್ ಸೆಂಟರ್ ಆರಂಭವಾಗಲಿದೆ. ಇದರಿಂದ ತೆಂಗು ಕಾರ್ಮಿಕರ ಕೊರತೆ ನೀಗಿಸಬಹುದು ಎಂಬುದು ತೆಂಗು ಅಭಿವೃದ್ಧಿ ಮಂಡಳಿಯ ಅಂದಾಜು.

               ತೆಂಗು ಅಭಿವದ್ಧಿ ಮಂಡಳಿಯ ಕಾಲ್ ಸೆಂಟರ್ ನಂಬರ್‍ನಲ್ಲಿ ತೆಂಗಿನಕಾಯಿ ಕೊಯ್ಲಿಗೆ ಕಾರ್ಮಿಕರನ್ನು ಬಯಸಿದರೆ, ಕಾಲ್ ಸೆಂಟರ್ ಮೂಲಕ ಆಯಾ ಪಂಚಾಯಿತಿಯನ್ನು ಸಂಪರ್ಕಿಸಿ ಮತ್ತು ಪಂಚಾಯಿತಿಯಲ್ಲಿ ನೋಂದಾಯಿಸಲಾದ ಕಾರ್ಮಿಕರು ಮನೆಗಳಿಗೆ ಬಂದು ಅಗತ್ಯವಿರುವಂತೆ ಕೊಯ್ಲು ನಿರ್ವಹಿಸುವರು. ತೆಂಗಿನ ನಾಟಿ ಮಾಡುವ ಕೂಲಿಯನ್ನು ಬೇಡಿಕೆದಾರರು ಮತ್ತು ಕಾರ್ಮಿಕರು ನಿರ್ಧರಿಸಬೇಕು. ತೆಂಗಿನ ಕಳೆ ಕೀಳುವುದರಿಂದ ಹಿಡಿದು ಕಟಾವಿನವರೆಗೆ ಕಾಲ್ ಸೆಂಟರ್ ಸಂಪರ್ಕಿಸಿ ಕಾರ್ಮಿಕರನ್ನು ಪಡೆಯಬಹುದಾಗಿದೆ. 

    ‘ತೆಂಗು ಕೊಯ್ಲು ಮಿತ್ರರು’ ಯೋಜನೆ 2011 ರಲ್ಲಿ ಪ್ರಾರಂಭವಾಯಿತು. ಈ ಮೂಲಕ 32000ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲಾಗಿದೆ. ತೆಂಗಿನ ಗಿಡ ತಯಾರಿಸುವುದರಿಂದ ಹಿಡಿದು ಕಟಾವು ಮಾಡುವವರೆಗೆ ತರಬೇತಿ ನೀಡಲಾಗಿದೆ. ಕಾಲ್ ಸೆಂಟರ್ ಮೂಲಕ ತಮ್ಮ ಸೇವೆಗಳನ್ನು ಅಗತ್ಯವಿರುವ ರೈತರಿಗೆ ತಲುಪಿಸಬಹುದು ಎಂಬುದು ಇದರ ದೊಡ್ಡ ವೈಶಿಷ್ಟ್ಯ. ರಾಜ್ಯದಲ್ಲಿ ಇದುವರೆಗೆ 900ಕ್ಕೂ ಹೆಚ್ಚು ಮಂದಿ ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಕಾಲ್ ಸೆಂಟರ್ ಕುರಿತು ಜಾಹೀರಾತಿನಿಂದ ಪ್ರತಿ ದಿನ ಐವತ್ತಕ್ಕೂ ಹೆಚ್ಚು ರೈತರು ಮತ್ತು ಕಾರ್ಮಿಕರು ಮಂಡಳಿಯನ್ನು ಸಂಪರ್ಕಿಸುತ್ತಿದ್ದಾರೆ ಎಂದು ತೆಂಗು ಅಭಿವೃದ್ದಿ ಮಂಡಳಿಯ ಸಹಾಯಕ ನಿರ್ದೇಶಕಿ  ಮಿನಿ ಮ್ಯಾಥ್ಯೂ ಹೇಳಿದ್ದಾರೆ. 


          ಅಭಿಮತ:

           ತೆಂಗು ಆರೈಕೆಗೆ ನುರಿತ ಕೆಲಸಗಾರರ ಕೊರತೆಯೇ ಬಹುತೇಕ ರೈತರು ಕೃಷಿ ಕೈಬಿಡಲು ಕಾರಣ. ಇಂತಹ ಉಪಕ್ರಮದ ಮೂಲಕ, ರೈತರ ಅಗತ್ಯಗಳನ್ನು ನೇರವಾಗಿ ಅರ್ಥೈಸಲಾಗುತ್ತದೆ ಮತ್ತು ಮಾನವ ಸಂಪನ್ಮೂಲವನ್ನು ಒದಗಿಸಲಾಗುತ್ತದೆ. ತರಬೇತಿ ಪಡೆದವರಿಗೆ ಉದ್ಯೋಗಾವಕಾಶಗಳನ್ನು ನೀಡಲಾಗುತ್ತದೆ. 

                          -ಮಿನಿ ಮ್ಯಾಥ್ಯೂ

                           ತೆಂಗು ಅಭಿವೃದ್ದಿ ಮಂಡಳಿಯ ಸಹಾಯಕ ನಿರ್ದೇಶಕಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries