HEALTH TIPS

ಶಬರಿಮಲೆ ಕಳಭಾಭಿಷೇಕದಲ್ಲಿ ಶೋಷಣೆ: ಸ್ವಯಂ ಪ್ರೇರಣೆಯಿಂದ ಪ್ರಕರಣ ಕೈಗೆತ್ತಿಕೊಂಡ ಹೈಕೋರ್ಟ್

                 ಕೊಚ್ಚಿ: ಶಬರಿಮಲೆಯಲ್ಲಿ ಕಳಭಾಭಿಷೇಕಕ್ಕೆ ಭಕ್ತಾದಿಗಳು ನೇರವಾಗಿ ಸಾಮಾನುಗಳನ್ನು ನೀಡಿದರೂ ಸಂಪೂರ್ಣ ಹಣವನ್ನು ದೇವಸ್ವಂ ಮಂಡಳಿ ತೆಗೆದುಕೊಳ್ಳುತ್ತಿದೆ ಎಂಬ ಮಾಧ್ಯಮ ವರದಿ ಆಧರಿಸಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದೆ.

              ಶಬರಿಮಲೆ ವಿಶೇಷ ಆಯುಕ್ತರಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು,  ದೇವಸ್ವಂ ಬೋರ್ಡಿನಿಂದಲೂ ಹೈಕೋರ್ಟ್ ವಿವರಣೆ ಕೇಳಿದೆ.

             ನ್ಯಾಯಮೂರ್ತಿ ಅನಿಲ್. ಕೆ. ನರೇಂದ್ರನ್, ನ್ಯಾಯಮೂರ್ತಿ ಜಿ. ಗಿರೀಶ್ ಅವರನ್ನೊಳಗೊಂಡ ವಿಭಾಗೀಯ ಪೀಠ ಇದೇ 29ರಂದು ಅರ್ಜಿಯ ವಿಚಾರಣೆ ನಡೆಸಲಿದೆ ದೇವಸ್ವಂ ಮಂಡಳಿ ಭಕ್ತರ ಶೋಷಣೆಗೆ ಸಂಬಂಧಿಸಿದ ಸುದ್ದಿಯನ್ನು ಆಧರಿಸಿ ವರದಿ ಕೇಳಲಾಗಿದೆ. 

                ಶಬರಿಮಲೆಯಲ್ಲಿ ಕಳಭಾಭಿಷೇಕಕ್ಕೆ ಭಕ್ತರು 38,400 ರೂ.ತೆರಬೇಕಾಗುತ್ತದೆ.  ಶ್ರೀಗಂಧವನ್ನು ಸ್ವಂತವಾಗಿ ಖರೀದಿಸಿ ಪುಡಿ ಮಾಡುವವರು ದೇವಸ್ವಂ ಶುಲ್ಕ 12,500 ರೂ.ಗಳನ್ನು ಪಾವತಿಸಬೇಕು, ಆದರೆ ಪ್ರಸ್ತುತ ಸಂಪೂರ್ಣ ಹಣವನ್ನು ಭಕ್ತರಿಂದ ಸಂಗ್ರಹಿಸಲಾಗುತ್ತದೆ. ಈ ಕುರಿತ ಸುದ್ದಿಯ ಆಧಾರದ ಮೇಲೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ದೇವಸ್ವಂ ಮಂಡಳಿಯ ಮುಖ್ಯ ವಿಜಿಲೆನ್ಸ್ ಮತ್ತು ಭದ್ರತಾ ಅಧಿಕಾರಿಯನ್ನು ಹೈಕೋರ್ಟ್ ಸ್ವಯಂಪ್ರೇರಿತ ಪ್ರತಿವಾದಿಯಾಗಿ ಅರ್ಜಿಯಲ್ಲಿ ಮಾಡಲಾಗಿದೆ.

              ನ.17ರಂದು ಕಳಭಾಭಿಷೇಕಕ್ಕೆ ಹೆಚ್ಚಿನ ಹಣ ತೆಗೆದಿರುವ ಘಟನೆಯ ಕುರಿತು ಮುಖ್ಯ ವಿಜಿಲೆನ್ಸ್ ಮತ್ತು ಭದ್ರತಾ ಅಧಿಕಾರಿ ತನಿಖೆ ನಡೆಸಿ ಶಬರಿಮಲೆ ವಿಶೇಷ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ ಎಂದು ದೇವಸ್ವಂ ಮಂಡಳಿಯ ವಕೀಲರು ಮತ್ತು ಅಮಿಕಸ್ ಕ್ಯೂರಿ ಹೈಕೋರ್ಟ್‍ಗೆ ತಿಳಿಸಿದರು. ನಂತರ ಹೈಕೋರ್ಟ್ ಶಬರಿಮಲೆ ವಿಶೇಷ ಆಯುಕ್ತರಿಂದ ವರದಿ ಕೇಳಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries