ಕೊಲ್ಲಂ: ಕೊಲ್ಲಂನಲ್ಲಿ ನಡೆದ 62ನೇ ರಾಜ್ಯ ಶಾಲಾ ಕಲೋತ್ಸವದಲ್ಲಿ ಕಣ್ಣೂರು ಜಿಲ್ಲೆ ಸಮಗ್ರ ಪ್ರಶಸ್ತಿ ತಮ್ಮದಾಗಿಸಿದೆ. ಕಣ್ಣೂರು ಜಿಲ್ಲೆ 952 ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿತು.
23 ವರ್ಷಗಳ ನಂತರ ಕಣ್ಣೂರು ಈ ಪ್ರಥಮ ಪ್ರಶಸ್ತಿ ಗೆÀದ್ದುಕೊಂಡಿದೆ. 62 ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಕಣ್ಣೂರು ಕಲಾ ಕಿರೀಟ ಮುಡಿಗೇರಿಸಿಕೊಂಡಿದೆ. 949 ಅಂಕಗಳೊಂದಿಗೆ ಕೋಝಿಕ್ಕೋಡ್ ಎರಡನೇ ಸ್ಥಾನಕ್ಕೆ ತೃಪ್ತಪಟ್ಟಿದೆ.
ನಿಕಟ ಹೋರಾಟದಲ್ಲಿ ಕಣ್ಣೂರು ಕಿರೀಟವನ್ನು ತನ್ನದಾಗಿಸಿಕೊಂಡಿತು. ನಿನ್ನೆ ರಾತ್ರಿಯ ಹೊತ್ತಿಗೆ ಮೊದಲ ನಾಲ್ಕು ದಿನಗಳ ಕಣ್ಣೂರಿನ ಪ್ರಾಬಲ್ಯವನ್ನು ಕೋಳಿಕ್ಕೋಡ್ ಹಿಂದಿಕ್ಕಿತ್ತು. ಆದರೆ ಕಣ್ಣೂರು ಇಂದಿನ ಸ್ಪರ್ಧೆಗಳಲ್ಲಿ ಮತ್ತೆ ಪ್ರಗತಿ ಸಾಧಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪಾಲಕ್ಕಾಡ್ 938 ಅಂಕಗಳೊಂದಿಗೆ ತೃತೀಯ ಮತ್ತು ತ್ರಿಶೂರ್ 925 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.