HEALTH TIPS

ಬಾಲೇಶ್ವರದಿಂದ ಕಣಕ್ಕೆ ಇಳಿಯುವುದಿಲ್ಲ: ಸಚಿವ ವೈಷ್ಣವ್ ಸ್ಪಷ್ಟನೆ

               ಬಾಲೇಶ್ವರ (PTI): ಲೋಕಸಭಾ ಚುನಾವಣೆಯಲ್ಲಿ ತಾವು ಒಡಿಶಾದ ಬಾಲೇಶ್ವರ ಕ್ಷೇತ್ರದಿಂದ ಕಣಕ್ಕೆ ಇಳಿಯುವುದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಸ್ಪಷ್ಟಪಡಿಸಿದ್ದಾರೆ.

              ಈಗ ರಾಜ್ಯಸಭಾ ಸದಸ್ಯ ಆಗಿರುವ ವೈಷ್ಣವ್ ಅವರನ್ನು ಬಿಜೆಪಿಯು ಬಾಲೇಶ್ವರದಿಂದ ಕಣಕ್ಕೆ ಇಳಿಸಬಹುದು ಎಂಬ ಊಹಾಪೋಹಗಳು ಇದ್ದವು.

               ವೈಷ್ಣವ್ ಅವರು ಐಎಎಸ್ ಅಧಿಕಾರಿ ಆಗಿದ್ದಾಗ ಬಾಲೇಶ್ವರದಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ವೈಷ್ಣವ್ ಅವರು ಬಾಲೇಶ್ವರಕ್ಕೆ ಮತ್ತೆ ಮತ್ತೆ ಭೇಟಿ ನೀಡಿದ್ದು ಹಾಗೂ ಇಲ್ಲಿನ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು ಊಹಾಪೋಹಗಳು ಇನ್ನಷ್ಟು ಹೆಚ್ಚಲು ಕಾರಣವಾಗಿತ್ತು.

                 ಈಗ ಬಿಜೆಪಿಯ ಪ್ರತಾಪ್ ಸಾರಂಗಿ ಅವರು ಬಾಲೇಶ್ವರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 'ಇಲ್ಲಿ ಪ್ರತಾಪ್ ಇದ್ದಾರೆ. ನಾನು ಇಲ್ಲಿಂದ ಸ್ಪರ್ಧಿಸುವುದಿಲ್ಲ' ಎಂದು ವೈಷ್ಣವ್ ಅವರು ಹೇಳಿದರು. ಇಲ್ಲಿನ ರೈಲು ನಿಲ್ದಾಣದ ಫಲಕಗಳಲ್ಲಿ ಇರುವ 'ಬಾಲಾಸೋರ್' ಹೆಸರನ್ನು 'ಬಾಲೇಶ್ವರ' ಎಂದು ಬದಲಿಸುವಂತೆ ವೈಷ್ಣವ್ ಅವರು ಅಧಿಕಾರಿಗಳಿಗೆ ಭಾನುವಾರ ಸೂಚಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries