HEALTH TIPS

'ಭಾರತ್‌ ಮಾತಾ ಕೀ ಜೈ' ಘೊಷಣೆ ಕೂಗದವರ ವಿರುದ್ಧ ಸಚಿವೆ ಮೀನಾಕ್ಷಿ ಲೇಖಿ ಆಕ್ರೋಶ

            ಕೋಯಿಕ್ಕೋಡ್‌ : 'ಭಾರತ್‌ ಮಾತಾ ಕೀ ಜೈ' ಘೊಷಣೆ ಕೂಗದ ವೀಕ್ಷಕರನ್ನು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಯುವ ಸಮಾವೇಶದಿಂದ ಹೊರಗೆ ಕಳುಹಿಸಿದ ಘಟನೆ ಶನಿವಾರ ನಡೆದಿದೆ.

             ತಾನು ಉಚ್ಚರಿಸಿದ ಘೋಷಣೆಯನ್ನು ಪುನರಾವರ್ತಿಸುವಂತೆ ಪದೇ ಪದೇ ಹೇಳಿದರೂ ನಿರಾಕರಿಸಿದ ವೀಕ್ಷಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವೆ ಲೇಖಿ, ಮಹಿಳೆಯೊಬ್ಬರನ್ನು ಕಾರ್ಯಕ್ರಮದ ಸ್ಥಳದಿಂದ ಹೊರಹೋಗುವಂತೆ ಸೂಚಿಸಿದರು.

              ಕೇರಳದಲ್ಲಿ ನಡೆಯುತ್ತಿರುವ ಯುವ ಸಮಾವೇಶದಲ್ಲಿ ತಮ್ಮ ಭಾಷಣದ ಮುಕ್ತಾಯದ ವೇಳೆ ಸಚಿವೆ ಲೇಖಿ ಅವರು ಭಾರತ್‌ ಮಾತಾ ಕೀ ಜೈ ಘೊಷಣೆ ಕೂಗಿದರು. ಬಳಿಕ ಅದನ್ನು ವೀಕ್ಷಕರು ಪುನಾರವರ್ತಿಸುವಂತೆ ತಿಳಿಸಿದರು. ವೀಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ಬರಲಿಲ್ಲ. ಆಗ ಕೋಪಗೊಂಡ ಸಚಿವೆ 'ಭಾರತ ನಿಮ್ಮ ಮನೆಯಲ್ಲ ಎಂದೆನಿಸುತ್ತದೆ' ಎಂದರು. ಮಹಿಳೆಯೊಬ್ಬರನ್ನು ಎದ್ದು ನಿಲ್ಲಲು ಹೇಳಿದರು. ಸಚಿವೆ ಮತ್ತೊಮ್ಮೆ ಘೋಷಣೆ ಕೂಗಿದಾಗಲೂ ಮಹಿಳೆ ಅದನ್ನು ಪುನರಾವರ್ತಿಸಲಿಲ್ಲ. ಆಕ್ರೋಶಗೊಂಡ ಸಚಿವೆ 'ನೀವು ಕಾರ್ಯಕ್ರಮ ಸ್ಥಳದಿಂದ ನಿರ್ಗಮಿಸಬಹುದು' ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries