HEALTH TIPS

ಸಿದ್ಧಾರ್ಥ್ ಸಾವು; ಪೋಲೀಸರಿಂದ ಡಿಜಿಟಲ್ ಸಾಕ್ಷ್ಯ ಸಂಗ್ರಹ: ಎಸ್‍ಎಫ್‍ಐ ಪದಾಧಿಕಾರಿ ಹಾಗೂ ಸಹಪಾಠಿ ಅಕ್ಷಯ್ ಹೇಳಿಕೆ ದಾಖಲು

                ವಯನಾಡ್: ಪಶುವೈದ್ಯಕೀಯ ಕಾಲೇಜಿನ ಸಿದ್ಧಾರ್ಥ್ ಸಾವಿನ ಪ್ರಕರಣದಲ್ಲಿ ಡಿಜಿಟಲ್ ಸಾಕ್ಷ್ಯಕ್ಕಾಗಿ ಪೋಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸೈಬರ್ ಸೆಲ್ ಸಹಾಯದಿಂದ ವೈತಿರಿ ಪೋಲೀಸರು ಆರೋಪಿಗಳ ಪೋನ್‍ಗಳನ್ನು ವಿವರವಾಗಿ ಪರಿಶೀಲಿಸಲಿದ್ದಾರೆ.

                 ಆರೋಪಿಗಳು ಸಿದ್ಧಾರ್ಥ್ ನನ್ನು ಥಳಿಸಿದ ಚಿತ್ರಗಳನ್ನು ತೆಗೆದುಕೊಂಡಿದ್ದಾರೆಯೇ ಎಂದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಸಾವಿನ ನಂತರ ಆರೋಪಿಗಳು ಪರಸ್ಪರ ಕಳುಹಿಸಿರುವ ಸಂದೇಶಗಳನ್ನೂ ಪೋಲೀಸರು ಪರಿಶೀಲಿಸಲಿದ್ದಾರೆ.

           ಇದೇ ವೇಳೆ, ಸಿದ್ದಾರ್ಥ್ ಸಾವಿನ ಕುರಿತು ಎಸ್‍ಎಫ್‍ಐ ಪದಾಧಿಕಾರಿ ಹಾಗೂ ಸಿದ್ದಾರ್ಥ್ ಸಹಪಾಠಿಯಾಗಿದ್ದ ಅಕ್ಷಯ್ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಗುಂಪು ವಿಚಾರಣೆ ಮತ್ತು ಎಸ್‍ಎಫ್‍ಐ ಥಳಿಸಿರುವ ಬಗ್ಗೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ. ಸಿದ್ದಾರ್ಥ್ ಕುಟುಂಬಸ್ಥರು ಆತನ ವಿರುದ್ಧ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

              ಸಿದ್ಧಾರ್ಥ್ ಸಾವಿನ ಪ್ರಕರಣದ ಐವರು ಆರೋಪಿಗಳನ್ನು ಪೋಲೀಸರು ಇಂದು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಸಿಂಜೋ, ಕಾಶಿನಾಥನ್, ಅಮೀನ್ ಅಕ್ಬರ್ ಅಲಿ, ಅರುಣ್ ಮತ್ತು ಅಮಲ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಿದ್ಧಾರ್ಥ್ ನನ್ನು ಅಮಾನುಷವಾಗಿ ಥಳಿಸಲಾಯಿತು ಎಂದು ತಿಳಿದುಬಂದಿದೆ. 

    ಈ ಮಧ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲು ಮುಖ್ಯಮಂತ್ರಿ ಇಂದು ಘೋಷಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries