HEALTH TIPS

ವಯನಾಡಿನಲ್ಲಿ ರಾಹುಲ್ ವಿರುದ್ಧ ಕೆ ಸುರೇಂದ್ರನ್ ಸ್ಪರ್ಧೆ: ಮಂಡಿಯಲ್ಲಿ ಕಂಗನಾ ರಣಾವತ್: ಶೆಟ್ಟರ್ ಗೆ ಬೆಳಗಾವಿ: ಬಿಜೆಪಿ ಐದನೇ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

                  ನವದೆಹಲಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಐದನೇ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಲಾಗಿದೆ. 111 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.

                  ವಯನಾಡಿನಲ್ಲಿ ಬಿ.ಜೆ.ಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಸ್ಪರ್ಧಿಸಲಿದ್ದಾರೆ. ಆಲತ್ತೂರು ಡಾ. ಟಿ.ಎನ್. ಸರಸು, ಎರ್ನಾಕುಳಂನಲ್ಲಿ ಡಾ. ಕೆಎಸ್ ರಾಧಾಕೃಷ್ಣನ್, ಕೊಲ್ಲಂನಲ್ಲಿ ಜಿ. ಕೃಷ್ಣಕುಮಾರ್ ಸ್ಪರ್ಧಿಸಲಿದ್ದಾರೆ.

                 ಬಿ.ಜೆ.ಪಿ ಈ ಪಟ್ಟಿಯಲ್ಲಿ ಬಾಲಿವುಡ್ ತಾರೆ ಕಂಗನಾ ರಣಾವತ್ ಕೂಡ ಸ್ಥಾನ ಪಡೆದಿದ್ದಾರೆ. ಮಂಡಿಯಿಂದ ನಟಿ ಸ್ಪರ್ಧಿಸಲಿದ್ದಾರೆ. ಸುಲ್ತಾನ್‍ಪುರದಲ್ಲಿ ಮೇನಕಾ ಗಾಂಧಿ ಸ್ಪರ್ಧಿಸಿದ್ದರೆ, ವರುಣ್ ಗಾಂಧಿಗೆ ಈ ಬಾರಿ ಸ್ಥಾನ ನೀಡಿಲ್ಲ.

                   ನಿನ್ನೆ ಬಿಜೆಪಿ ಸೇರಿದ ನವೀನ್ ಜಿಂದಾಲ್ ಕುರುಕ್ಷೇತ್ರದ ಅಭ್ಯರ್ಥಿ. ಅತುಲ್ ಗರ್ಗ್ ಗಾಜಿಯಾಬಾದ್‍ನಿಂದ ಮತ್ತು ಜಿತಿನ್ ಪ್ರಸಾದ ಪಿಲಿಭಿತ್‍ನಿಂದ ಸ್ಪರ್ಧಿಸಲಿದ್ದಾರೆ. ಜಾರ್ಖಂಡ್‍ನ ಧುಮ್ಕಾದಲ್ಲಿ ಸೀತಾ ಸೊರೆನ್, ಸಂಬಲ್ಪುರದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ತಿರುಪತಿಯಲ್ಲಿ ವರುಪ್ರಸಾದ್ ರಾವ್ ಅಭ್ಯರ್ಥಿಗಳು.

               ಮಾಜಿ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ - ಸರನ್, ಕೇಂದ್ರ ಸಚಿವ ನಿತ್ಯಾನಂದ ರೈ - ಉಜಿಯಾರ್ಪುರ್, ಕೇಂದ್ರ ಸಚಿವ ಗಿರಿರಾಜ ಸಿಂಗ್ - ಬೇಗುಸರಾಯ್ ಮತ್ತು ಪಾಟ್ನಾ ಸಾಹಿಬ್ ನಲ್ಲಿ ರವಿಶಂಕರ್ ಪ್ರಸಾದ್ ಸ್ಪರ್ಧಿಸಲಿದ್ದಾರೆ. ಬಿಜೆಪಿಗೆ ಮರಳಿದ ಕರ್ನಾಟಕದ ಉಪ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬೆಳಗಾವಿಯಲ್ಲಿ ಸ್ಪರ್ಧಿಸಲಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries