HEALTH TIPS

ಹಿಮಾಚಲ ಸರ್ಕಾರ ಅಪಾಯದಲ್ಲಿಲ್ಲ: ಕಾಂಗ್ರೆಸ್‌

            ವದೆಹಲಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರವು ಅಪಾಯದಲ್ಲಿಲ್ಲ. ಅದು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದೆ ಎಂದು ಪಕ್ಷದ ಮೂಲಗಳು ಸೋಮವಾರ ತಿಳಿಸಿವೆ.

             ರಾಜ್ಯ ಕಾಂಗ್ರೆಸ್‌ ಅಧ್ಯಕ್ಷೆ ಪ್ರತಿಭಾ ಸಿಂಗ್‌ ಅವರ ಪುತ್ರ ಹಾಗೂ ಸಚಿವ ವಿಕ್ರಮಾದಿತ್ಯ ಸಿಂಗ್‌ ಅವರು ಎಐಸಿಸಿ ನಾಯಕರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಎಂದೂ ಹೇಳಿವೆ.

              ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್ ಸುಖು ಅವರ ಮೇಲೆ ಎಐಸಿಸಿಗೆ ನಂಬಿಕೆ ಇದೆ. ನಾಯಕತ್ವ ಬದಲಾವಣೆ ಸದ್ಯಕ್ಕೆ ಅಸಂಭವ ಎಂದು ವಿವರಿಸಿವೆ.

            'ಸರ್ಕಾರಕ್ಕೆ ಬಹುಮತವಿದ್ದು, ಅದು ಹಿಮಾಚಲ ಪ್ರದೇಶದ ಜನರಿಗಾಗಿ ಕಾರ್ಯನಿರ್ವಹಿಸಲಿದೆ. ಹಣ ಮತ್ತು ಅಧಿಕಾರವನ್ನು ಉಪಯೋಗಿಸಿ ಪತನಗೊಳಿಸಲು ಸಾಧ್ಯವಾಗದು' ಎಂದು ಪಕ್ಷದ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

              ಬಂಡಾಯ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪಕ್ಷಾಂತರದ ರಾಜಕಾರಣ ಹಿಮಾಚಲದ ಜನರಿಗೆ ಇಷ್ಟವಿಲ್ಲ ಎಂದೂ ಹೇಳಿವೆ.

ಸರ್ಕಾರದ ಸ್ಥಿರತೆ: ಪ್ರತಿಕ್ರಿಯಿಸದ ಸುಖು

         ಹಿಮಾಚಲ ಪ್ರದೇಶ ಸರ್ಕಾರದ ಸ್ಥಿರತೆ ಬಗ್ಗೆ ಪ್ರತಿಕ್ರಿಯಿಸಲು ಸುಖ್ವಿಂದರ್‌ ಸಿಂಗ್ ಸುಖು ಸೋಮವಾರ ನಿರಾಕರಿಸಿ‌ದರು.

             ಸರ್ಕಾರವು ಶೀಘ್ರ ಪತನಗೊಳ್ಳಲಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳಿಕೆ ನೀಡಿರುವುದರ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಈ ಕುರಿತು ಬಿಜೆಪಿ ನಾಯಕರನ್ನೇ ಕೇಳಿ' ಎಂದರು.

              ಮುಂದಿನ ದಿನಗಳಲ್ಲಿ ಏನು ಬೇಕಾದರೂ ನಡೆಯಬಹುದು, ಬಿಜೆಪಿ ಕಾರ್ಯಕರ್ತರು ಸಿದ್ಧರಾಗಿರಿ ಎಂದು ವಿರೋಧ ಪಕ್ಷದ ನಾಯಕ ಜೈರಾಮ್‌ ಠಾಕೂರ್‌ ಅವರು ಭಾನುವಾರ ಹೇಳಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries