HEALTH TIPS

ರಾಜ್ಯದಲ್ಲಿ ವೈದ್ಯಕೀಯ ವೃತ್ತಿಪರರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ: ಕಳವಳ ವ್ಯಕ್ತಪಡಿಸಿದ ಹೈಕೋರ್ಟ್

               ಕೊಚ್ಚಿ: ರಾಜ್ಯದಲ್ಲಿ ವೈದ್ಯಕೀಯ ವೃತ್ತಿಪರರ ಮೇಲೆ ಹಿಂಸಾಚಾರ ಹೆಚ್ಚುತ್ತಿದೆ ಎಂದು ಹೈಕೋರ್ಟ್ ಬೊಟ್ಟುಮಾಡಿ ಎಚ್ಚರಿಸಿದೆ. ಕೇರಳ ಆರೋಗ್ಯ ಸೇವಾ ವ್ಯಕ್ತಿಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳ (ಹಿಂಸಾಚಾರ ತಡೆ ಮತ್ತು ಆಸ್ತಿ ಹಾನಿ) ಕಾಯ್ದೆಗೆ ತಿದ್ದುಪಡಿ ತಂದರೂ ವೈದ್ಯಕೀಯ ವೃತ್ತಿಪರರ ಮೇಲಿನ ದಾಳಿಗಳು ಕಡಮೆಯಾಗಿಲ್ಲ ಎಂದು ಏಕ ಪೀಠ ಗಮನಿಸಿದೆ.

               ಮಹಿಳಾ ಆಯುರ್ವೇದ ವೈದ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಏಕೈಕ ಆರೋಪಿ ತಿರುವನಂತಪುರಂ ನಿವಾಸಿ ಜೋಸೆಫ್ ಚಾಕೋ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎ. ಬದ್ರುದ್ದೀನ್ ತಿರಸ್ಕರಿಸಿದ್ದಾರೆ. 

             ಮಾರ್ಚ್ 18 ರಂದು ಚಾಕೊ ಕ್ಲಿನಿಕ್‍ನಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿ ತಾಳಿ ಸಹಿತ ಮಾಲೆಯನ್ನು ಕದ್ದೊಯ್ದಿದ್ದನು ಎಂದು ಪ್ರಾಸಿಕ್ಯೂಷನ್ ಹೇಳುತ್ತದೆ. ಆರೋಪಿಗಳು ಕನ್ಸಲ್ಟಿಂಗ್ ರೂಮ್ ಪ್ರವೇಶಿಸಿ ಮಾತ್ರೆ ಕೇಳಿದ್ದ. ದಾಸ್ತಾನು ಇಲ್ಲ ಎಂದು ವೈದ್ಯರು ತಿಳಿಸಿದಾಗ ಹಲ್ಲೆ ನಡೆಸಿ ನಿಂದಿಸಿರುವುದು ಪ್ರಕರಣ. ಇದರ ಬೆನ್ನಲ್ಲೇ ಪೆÇಲೀಸರು ಚಾಕೋ ವಿರುದ್ಧ ಪ್ರಕರಣ ದಾಖಲಿಸಿದ್ದು, ನಂತರ ಅರ್ಜಿದಾರರು ಹೈಕೋರ್ಟ್‍ನಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದರು.

             ಆದರೆ ತನಿಖೆಯನ್ನು ಹಿರಿಯ ಪೋಲೀಸ್ ಅಧಿಕಾರಿಗೆ ವಹಿಸಬೇಕು ಎಂದು ವೈದ್ಯರು ಮನವಿ ಸಲ್ಲಿಸಿದರು. ಪ್ರಾಸಿಕ್ಯೂಷನ್ ಚಾಕೊ ಅವರ ಜಾಮೀನು ಅರ್ಜಿಯನ್ನು ಬಲವಾಗಿ ವಿರೋಧಿಸಿತು, ಸಮರ್ಥ ತನಿಖೆಗಾಗಿ ಚಾಕೊ ಅವರ ಕಸ್ಟಡಿ ಅಗತ್ಯ ಎಂದು ಸರ್ಕಾರ ವಾದಿಸಿತು.

             ಕ್ಷುಲ್ಲಕ ಕಾರಣಗಳಿಗಾಗಿ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ನಿಂದಿಸುವುದು ಮತ್ತು ದೌರ್ಜನ್ಯ ನಡೆಸುವುದು ಸಾಮಾನ್ಯ ಅಭ್ಯಾಸವಾಗಿದೆ ಎಂದು ಗಮನಿಸಿದ ನ್ಯಾಯಾಲಯ ಚಾಕೊ ಅವರ ಅರ್ಜಿಯನ್ನು ವಜಾಗೊಳಿಸಿದೆ. ವೈದ್ಯರ ಮನವಿಯಲ್ಲಿ, ತನಿಖಾಧಿಕಾರಿಗಳು ಆರೋಪಿಗಳನ್ನು ಇನ್ನೂ ಬಂಧಿಸದಿದ್ದರೂ, ಸಾಕ್ಷ್ಯಾಧಾರಗಳು ತನಿಖೆಯು ಪೂರ್ವಾಗ್ರಹವಿಲ್ಲದೆ ಮುಂದುವರಿಯುತ್ತಿದೆ ಎಂದು ಸೂಚಿಸುತ್ತದೆ ಎಂದು ಪೀಠ ಹೇಳಿದೆ. ತನಿಖಾಧಿಕಾರಿಯ ವರ್ಗಾವಣೆ ಅನಗತ್ಯವಾಗಿದ್ದು, ಹಾಲಿ ತನಿಖಾಧಿಕಾರಿಯೇ ಮುಂದುವರಿಯಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries