HEALTH TIPS

ಡಿಸಿಸಿ ಖಜಾಂಚಿ ಆತ್ಮಹತ್ಯೆ ಘಟನೆ: ಜನವರಿ 15 ರವರೆಗೆ ಕಾಂಗ್ರೆಸ್ ನಾಯಕರನ್ನು ಬಂಧಿಸದಂತೆ ಮೌಖಿಕ ಆದೇಶ ನೀಡಿದ ನ್ಯಾಯಾಲಯ

ಕಲ್ಪೆಟ್ಟ: ಡಿಸಿಸಿ ಖಜಾಂಚಿ ಎನ್ ಎಂ ವಿಜಯನ್ ಸಾವಿನ ಆರೋಪಿಗಳಾದ ಕಾಂಗ್ರೆಸ್ ನಾಯಕರನ್ನು ಜನವರಿ 15 ರವರೆಗೆ ಬಂಧಿಸಬಾರದು ಎಂದು ನ್ಯಾಯಾಲಯ ಮೌಖಿಕವಾಗಿ ನಿರ್ದೇಶಿಸಿದೆ. ವಯನಾಡ್ ಪ್ರಧಾನ ಸೆಷನ್ಸ್ ನ್ಯಾಯಾಲಯವು ಈ ಸೂಚನೆಯನ್ನು ನೀಡಿದೆ.

ಡಿಸಿಸಿ ಅಧ್ಯಕ್ಷ ಎನ್ ಡಿ ಅಪ್ಪಚ್ಚನ್ ಮತ್ತು ಶಾಸಕ ಐ ಸಿ ಬಾಲಕೃಷ್ಣನ್ ಅವರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಪರಿಗಣಿಸುವಾಗ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಈ ಪ್ರಕರಣದಲ್ಲಿ ಯಾವುದೇ ಸಮಯದಲ್ಲಿ ಬಂಧನವಾಗುವ ನಿರೀಕ್ಷೆಯಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಜನವರಿ 15 ರಂದು ಪ್ರಕರಣದ ಡೈರಿಯನ್ನು ಹಾಜರುಪಡಿಸುವಂತೆ ನ್ಯಾಯಾಲಯ ಪೋಲೀಸರಿಗೆ ಸೂಚಿಸಿದೆ.

ಎನ್.ಎಂ. ವಿಜಯನ್ ಸಾವಿನಲ್ಲಿ ಶಾಸಕ ಐ.ಸಿ. ಬಾಲಕೃಷ್ಣನ್, ಡಿಸಿಸಿ ಅಧ್ಯಕ್ಷ ಎನ್.ಡಿ. ಅಪ್ಪಚ್ಚನ್ ಮತ್ತು ಕೆ.ಕೆ. ಗೋಪಿನಾಥ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ಮೊನ್ನೆ  ಹೊರಿಸಲಾಗಿತ್ತು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ಮೂವರು ಕಾಂಗ್ರೆಸ್ ನಾಯಕರು ವಯನಾಡಿನಲ್ಲಿ ಇಲ್ಲ ಎಂದು ವರದಿಯಾಗಿದೆ.

ಆದರೆ, ಐ.ಸಿ. ಬಾಲಕೃಷ್ಣನ್ ಪರಾರಿಯಾಗಿಲ್ಲ ಮತ್ತು ಶಾಸಕರಿಗೆ ಪೋಲೀಸ್ ರಕ್ಷಣೆ ಇದೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಪೋಲೀಸರು ಇನ್ನೂ ಹಾಜರಾಗಲು ಕೇಳಿಲ್ಲ ಎಂದು ವಕೀಲರು ಹೇಳಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries