ತಿರುಪತಿ: ಚೆನ್ನೈ ಮೂಲದ ಭಕ್ತರೊಬ್ಬರು ತಿರುಮಲ ತಿರುಪತಿ ದೇವಸ್ಥಾನಕ್ಕೆ ₹6 ಕೋಟಿ ದೇಣಿಗೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರ್ಧಮಾನ್ ಜೈನ್ ಎಂಬುವವರು ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ (ಎಸ್ವಿಬಿಸಿ)ಗೆ ₹5 ಕೋಟಿ ಹಾಗೂ ಶ್ರೀ ವೆಂಕಟೇಶ್ವರ ಗೋಸಂರಕ್ಷಣಾ ಟ್ರಸ್ಟ್ಗೆ ₹1 ಕೋಟಿ ದೇಣಿಗೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ತಿರುಮಲ ದೇಗುಲದ ರಂಗನಾಯಕ ಮಂಟಪದಲ್ಲಿ ಎಸ್ವಿಬಿಸಿಗೆ ₹5 ಕೋಟಿ ಹಾಗೂ ಎಸ್ವಿ ಗೋಸಂರಕ್ಷಣಾ ಟ್ರಸ್ಟ್ಗೆ ₹1 ಕೋಟಿಯನ್ನು ಡಿಡಿ ಮೂಲಕ ಟಿಟಿಡಿಗೆ ಹಸ್ತಾಂತರಿಸಿದರು ಎಂದು ಟಿಟಿಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವರ್ಧಮಾನ್ ಅವರು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರಿಗೆ ಡಿಡಿಗಳನ್ನು ಹಸ್ತಾಂತರಿಸಿದ್ದಾರೆ.




