HEALTH TIPS

ಕಣಿಪುರ ಜಾತ್ರೆ- ಇಂದು ಧ್ವಜಾರೋಹಣ

ಕುಂಬಳೆ: ಇತಿಹಾಸ ಪ್ರಸಿದ್ದ, ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಮಕರ ಸಂಕ್ರಮಣ ದಿನವಾದ ಇಂದಿನಿಂದ 18ರ ವರೆಗೆ ನಡೆಯಲಿದ್ದು ಇಂದು ಧ್ವಜಾರೋಹಣಗೊಂಡು 18 ರ ವರೆಗೆ ವೇದಮೂರ್ತಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ಕಾರ್ಮಿಕತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳಿಂದೊಡಗೂಡಿ ನಡೆಯಲಿದೆ. 

ಇಂದು ಬೆಳಿಗ್ಗೆ 8ರಿಂದ  ಸೋಪಾನ ಸಂಗೀತ (ಅಷ್ಟಪದಿ) ಕೆ.ವಿ. ರಾಜನ್ ಮಾರಾರ್, ಪಯ್ಯನ್ನೂರು ತಂಡದವರಿಂದ  9.30ರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಕಣಿಪುರ ಶ್ರೀ ಗೋಪಾಲಕೃಷ್ಣ ಸೇವಾ ಸಮಿತಿ ಕೃಷ್ಣನಗರ,ಸಂಪಿಗೆಕಟ್ಟೆ ಶ್ರೀ ವನದುರ್ಗಾ, ವನಶಾಸ್ತಾರ ಕ್ಷೇತ್ರ, ಕುಂಟಗೇರಡ್ಕ, ಕುಂಬಳೆ ಸೀಮೆಯ ಗಟ್ಟಿ ಸಮಾಜದವರು ದೇವಿನಗರ ಕುಂಬಳೆ,  ಸಾರ್ವಜನಿಕ ಭಕ್ತ ಮಹನೀಯರಿಂದ ನಡೆಯಲಿದೆ. 10 ರಿಂದ ಶ್ರೀ ಬಲಿ, ಧ್ವಜಾರೋಹಣ, ತುಲಾಭಾರ ಸೇವೆ, ಮಹಾಪೂಜೆ, ನಿತ್ಯಬಲಿ, ಮಧ್ಯಾಹ್ನ: ಅನ್ನದಾನ ನಡೆಯಲಿದೆ.ಸಂಜೆ 5 ಕ್ಕೆ ನಡೆ ತೆರೆಯುವುದು, 5.15ರಿಂದ 7.15ರ ತನಕ ಡಿ. ಸಾವಿತ್ರಿ ಕೆ. ಭಟ್ ದೊಡ್ಡಮಾಣಿ ಮತ್ತು ಬಳಗದವರಿಂದ ಕರ್ನಾಟಕ ಸಂಗೀತ ಕಛೇರಿ,  6.30ಕ್ಕೆ ದೀಪಾರಾಧನೆ, ರಾತ್ರಿ 7.30ರಿಂದ  ರಂಗಪೂಜೆ, ಉತ್ಸವ, ಶ್ರೀ ಭೂತಬಲಿ ನಡೆಯಲಿದೆ.

ನಾಳೆ ಬೆಳಿಗ್ಗೆ 6.ರಿಂದ ಉತ್ಸವ, ಶ್ರೀ ಬಲಿ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ  12.30ಕ್ಕೆ ಮಹಾಪೂಜೆ, ನಿತ್ಯಬಲಿ, 12 ರಿಂದ 2.30ರ ತನಕ ಅನ್ನದಾನ, ಸಂಜೆ 4.30ಕ್ಕೆ ನಡೆ ತೆರೆಯುವುದು, 5.15 ರಿಂದ 7.30ರ ತನಕ ರಾಗಮಾಲಿಕಾ ತಂಡ ನೆಲ್ಲಿಕಟ್ಟೆಯವರಿಂದ ಭಕ್ತಿ ರಸಮಂಜರಿ, ಸಂಜೆ 6.30ಕ್ಕೆ ದೀಪಾರಾಧನೆ, 7.30ರಿಂದ ಪೂಜೆ, ಸಣ್ಣದೀಪೋತ್ಸವ, ಶ್ರೀ ಭೂತಬಲಿ ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries