HEALTH TIPS

ವಕ್ಫ್ ಮಸೂದೆ ಮುನಂಬಮ್ ಸಮಸ್ಯೆಗೆ ಪರಿಹಾರವಲ್ಲ-ಬಿಜೆಪಿಯದ್ದು ಕೆರೆಯನ್ನು ಕದಡಿ ಮೀನು ಹಿಡಿಯುವ ಯತ್ನ ಕೊನೆಗೂ ವಿಫಲ: ಮುಖ್ಯಮಂತ್ರಿ

ತಿರುವನಂತಪುರಂ: ವಕ್ಫ್ ಮಸೂದೆಯಿಂದ ಮುನಂಬಮ್ ಸಮಸ್ಯೆ ಬಗೆಹರಿಯುವುದಿಲ್ಲ ಮತ್ತು ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ಕರೆತಂದಿರುವ ಬಿಜೆಪಿಯ ರಾಜಕೀಯ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಹಿರಿಯರ ಹಕ್ಕುಗಳನ್ನು ರಕ್ಷಿಸಲಾಗುವುದು. ಆಯೋಗ ನೇಮಕವಾದ ತಕ್ಷಣ ಮುಷ್ಕರ ನಿಲ್ಲಿಸುವಂತೆ ಕೇಳಲಾಯಿತು. ಬಿಜೆಪಿ ಮುನಂಬತ್‍ನಲ್ಲಿಕೆರೆಯನ್ನು ಕೆಸರು ಮಾಡಿ ಮೀನು ಹಿಡಿಯಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

ಮಸೂದೆಯ ಮೂಲಕ ಮುಸ್ಲಿಂ ವಿರೋಧಿ ಕಾರ್ಯಸೂಚಿಯನ್ನು ಜಾರಿಗೆ ತರಲು ಪ್ರಯತ್ನಿಸಲಾಯಿತು. ಆದರೆ ಬಿಜೆಪಿಯ ರಾಜಕೀಯ ಶೋಷಣೆ ವಿಫಲವಾಯಿತು. ಮುನಂಬಮ್ ಸಮಸ್ಯೆಗೆ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವುದೇ ಪರಿಹಾರ ಎಂದು ಬಿಜೆಪಿ ಪ್ರಚಾರ ಮಾಡಿತು. ಆದರದು ಬಿಜೆಪಿ ಗ್ರಹಿಸಿದ್ದ ಕುತ್ಸಿತ ಹಾದಿಯಲ್ಲಿ ಸಾಗದಿರುವುದು ಬಿಜೆಪಿಯನ್ನು ತಳಮಳಕ್ಕೀಡುಮಾಡಲಿದೆ ಎಂದವರು ರೇಗಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries