ನವದೆಹಲಿ: ನೌಕರಿಗೆ ಸಂಬಂಧಿಸಿದ ಯಾವುದೇ ವ್ಯಾಜ್ಯವನ್ನು ನಿರ್ದಿಷ್ಟವಾದ ನ್ಯಾಯಾಲಯದ ವ್ಯಾಪ್ತಿಯಲ್ಲೇ ಬಗೆಹರಿಸಿಕೊಳ್ಳಬೇಕು ಎಂಬ ಷರತ್ತನ್ನು ಖಾಸಗಿ ವಲಯದ ಉದ್ಯೋಗದಾತರು ನೇಮಕಾತಿ ಪತ್ರದಲ್ಲಿ ವಿಧಿಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತ ಮತ್ತು ಮನಮೋಹನ್ ಅವರು ಇರುವ ವಿಭಾಗೀಯ ಪೀಠವು ಈ ಮಾತು ಹೇಳಿದೆ.
'ನ್ಯಾಯಾಲಯದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳುವ ಹಕ್ಕನ್ನು ಯಾವುದೇ ಒಪ್ಪಂದದ ಮೂಲಕ ಕಿತ್ತುಕೊಳ್ಳಲು ಅವಕಾಶ ಇಲ್ಲ. ಆದರೆ ಆ ಹಕ್ಕನ್ನು ನಿರ್ದಿಷ್ಟ ನ್ಯಾಯಾಲಯಕ್ಕೆ ಸೀಮಿತಗೊಳಿಸಬಹುದು' ಎಂದು ಪೀಠವು ಹೇಳಿದೆ.




