HEALTH TIPS

ವಕ್ಫ್ ತಿದ್ದುಪಡಿ ಕಾಯ್ದೆ ಅಂಗೀಕಾರದೊಂದಿಗೆ ಮುನಂಬಮ್‍ನ ಜನರಿಗೆ ಶಾಶ್ವತ ಪರಿಹಾರ ಲಭಿಸುತ್ತದೆ ಎಂಬುದು ಭರವಸೆಗಳಷ್ಟೆ- ಇನ್ನಿರುವ ಭರವಸೆ ರಾಜ್ಯ ಸರ್ಕಾರ: ಮುನಂಬಮ್ ಸಮರ ಸಮಿತಿ

ಕೊಚ್ಚಿ: ವಕ್ಫ್ ತಿದ್ದುಪಡಿ ಕಾಯ್ದೆಯಿಂದ ಮಾತ್ರ ಮುನಂಬಮ್ ಜನರಿಗೆ ನ್ಯಾಯ ಸಿಗುವುದಿಲ್ಲ ಎಂಬ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಹೇಳಿಕೆಗೆ ಮುನಂಬಮ್ ಸಮರ ಸಮಿತಿ ನಿರಾಶೆ ವ್ಯಕ್ತಪಡಿಸಿದೆ.

ಪ್ರತಿಭಟನಾ ಸಮಿತಿ ಪ್ರತಿನಿಧಿ ಜೋಸೆಫ್ ಬೆನ್ನಿ ಮಾತನಾಡಿ, ಹೊಸ ಕಾನೂನಿನ ಮೂಲಕ ತಮ್ಮ ಸಮಸ್ಯೆ ಬಗೆಹರಿಯುತ್ತದೆ ಎಂದು ನಾವು ಆಶಿಸಿದ್ದೆವು, ಆದರೆ ಅದು ಆಗಲಿಲ್ಲ ಮತ್ತು ಅವರು ಸಂಪೂರ್ಣವಾಗಿ ನಿರಾಶೆಗೊಂಡಿರುವುದಾಗಿ ಹೇಳಿರುವರು. 

ಈಗ ಇರುವ ಏಕೈಕ ಭರವಸೆ ರಾಜ್ಯ ಸರ್ಕಾರದ ಮೇಲಿದೆ. ವಕ್ಫ್ ತಿದ್ದುಪಡಿ ಕಾಯ್ದೆ ಅಂಗೀಕಾರದೊಂದಿಗೆ ಮುನಂಬಮ್‍ನ ಜನರಿಗೆ ಶಾಶ್ವತ ಪರಿಹಾರ ಲಭಿಸುತ್ತದೆ ಎಂಬುದು ಭರವಸೆಗಳಾಗಿದ್ದವು.

ಆದರೆ ಈಗ ಸಚಿವರು ಈ ಕಾನೂನು ಮುನಂಬಮ್ ಜನರಿಗೆ ಶಾಶ್ವತ ಪರಿಹಾರವನ್ನು ಒದಗಿಸುವುದಿಲ್ಲ ಎಂದು ಹೇಳಿದ್ದು, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಮುಕ್ತಾಯಗೊಂಡ ನಂತರವೇ ಪರಿಹಾರಗಳನ್ನು ಕಂಡುಕೊಳ್ಳಲಾಗುವುದು ಎಂದು ಅವರು ಹೇಳುತ್ತಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries