HEALTH TIPS

17 ರಂದು ಕಾಸರಗೋಡು ರಂಗ ಚಿನ್ನಾರಿಯಿಂದ 'ಭಜನಾ ಸಂಪದ' ಕಾರ್ಯಕ್ರಮ

ಕಾಸರಗೋಡು: ಸಾಮಾಜಿಕ, ಸಾಂಸ್ಕøತಿಕ ಸಂಸ್ಥೆ ರಂಗ ಚಿನ್ನಾರಿ ಕಾಸರಗೋಡು ವತಿಯಿಂದ  ಭಜನಾ ಸಂಪದ ಕಾರ್ಯಕ್ರಮ ಮೇ 17ರಂದು ಬೆಳಗ್ಗೆ 9.30ರಿಂದ ಸಂಜೆ 5ರ ವರೆಗೆ ಕಾಸರಗೋಡು ರೈಲ್ವೆ ನಿಲ್ದಾಣ ರಸ್ತೆಯ ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದ'ಸಂಕೀರ್ತನಾ' ಸಭಾಂಗಣದಲ್ಲಿ ಜರುಗಲಿದೆ. 

'ಒಂದು ತಂಡ ಒಂದು ಭಜನೆ-ಐವತ್ತು ಭಜನಾ ಮಂಡಳಿಗಳು-ಐವತ್ತು ವಿಭಿನ್ನ ಭಜನೆಗಳು'ಎಂಬ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂತ್ರಾಲಯ ಶ್ರೀ ಗುರುರಾಘವೇಂದ್ರ ಮಠದ ವಿದ್ವಾನ್ ಸುಳಾದಿ ಹನುಮೇಶಾಚಾರ್, ಡಾ. ಅನಂತ ಕಾಮತ್, ಖ್ಯಾತ ಪತ್ರಕರ್ತ ರವೀಂದ್ರ ಜೋಶಿ, ಕಲಾವಿದರು, ಉದ್ಯಮಿಗಳು, ಸಾಮಾಜಿಕ, ಧಾರ್ಮಿಕ ಮುಖಂಡರು ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries